ನವದೆಹಲಿ: ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ನವ ಮಂಗಳೂರು ಸೇರಿ ದೇಶದ 12 ಬಂದರುಗಳಲ್ಲಿ ಉದ್ದಿಮೆಗಳಿಗೆ ಭೂಮಿ ನೀಡುವ ಸಂಬಂಧ ಹೊಸ ನೀತಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸುತ್ತಿದೆ.
ಬಂದರು ಆಧಾರಿತ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವುದು, ಬಂದರುಗಳಿಗೆ ಹೆಚ್ಚುವರಿ ಆದಾಯ ತಂದುಕೊಡುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 12 ಬಂದರುಗಳ ವ್ಯಾಪ್ತಿಯಲ್ಲಿರುವ 2.64 ಎಕರೆ ಭೂಮಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗುತ್ತಿದೆ.
ಭೂಮಿ ಹಂಚಿಕೆಗೆ ಸಂಬಂಧಿಸಿದ ಕರಡು ನೀತಿಗೆ ಸಂಬಂಧಿಸಿ ಸರ್ಕಾರ ಸೆ. 29ರೊಳಗೆ ಅಭಿ ಪ್ರಾಯ ಆಹ್ವಾನಿಸಿದೆ. ಉದ್ದೇಶಿತ ಯೋಜನೆಗಳು, ಬಂದರು ವ್ಯಾಪ್ತಿಯಲ್ಲಿರುವ ಭೂಮಿ ಕುರಿತು ಸಚಿವ ಗಡ್ಕರಿ ಈಗಾಗಲೇ ಮಾಹಿತಿ ಕೇಳಿದ್ದಾರೆ.
Advertisement