ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ 'ಚಿಕಿತ್ಸಕ ದಾಳಿ'; ಷೇರುಪೇಟೆ ಆಯೋಮಯ

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತೀಯ ಸೇನೆ ಉಗ್ರರ ಅಡಗುತಾಣಗಳ ಮೇಲೆ ಚಿಕಿತ್ಸಕ ದಾಳಿ ನಡೆಸಿ ಹಲವು ಉಗ್ರರನ್ನು ಕೊಂದು ಹಾಕಿದೆ ಎಂಬ ಸುದ್ದಿಗೆ ಭಾರತೀಯ ಷೇರುಪೇಟೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಮುಂಬೈ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತೀಯ ಸೇನೆ ಉಗ್ರರ ಅಡಗುತಾಣಗಳ ಮೇಲೆ ಚಿಕಿತ್ಸಕ ದಾಳಿ ನಡೆಸಿ ಹಲವು ಉಗ್ರರನ್ನು ಕೊಂದು ಹಾಕಿದೆ ಎಂಬ ಸುದ್ದಿಗೆ ಭಾರತೀಯ ಷೇರುಪೇಟೆ ನಡುಗಿದೆ. 
ದಿನದ ಪ್ರಾರಂಭಗದಲ್ಲಿ ಶಕ್ತಿಯುತವಾಗಿ ಮುನ್ನುಗ್ಗುತ್ತಿದ್ದ ಬಿ ಎಸ್ ಇ ಸೂಚ್ಯಂಕ ಭಾರತೀಯ ಸೇನೆ ಹೇಳಿಕೆ ನೀಡಿದ ನಂತರ 500 ಅಂಶಗಳಷ್ಟು ಕುಸಿದಿದೆ. 
ದಿನದ ಪ್ರಾರಂಭದಲ್ಲಿ ಬಿ ಎಸ್ ಇ ಸೂಚ್ಯಂಕ 28,423.14 ಅಂಶಗಳಿದ್ದರೆ ಮಧ್ಯಾಹ್ನ ಮೂರು ಘಂಟೆಯ ಹೊತ್ತಿಗೆ 444.60 ಅಂಕಗಳನ್ನು ಕಳೆದುಕೊಂಡು 27,848.21 ಅಂಶಗಳಾಗಿತ್ತು. 
ಎನ್ ಎಸ್ ಇ ಕೂಡ 147.65 ಅಂಶಗಳಷ್ಟು ಕುಸಿತ ಕಂಡು 1.69% ಕಡಿಮೆ ಅಂದರೆ 8597.50 ಅಂಕಕ್ಕೆ ಇಳಿದಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com