ಸೆಬಿ ಪರ ವಕೀಲ ಅರವಿಂದ್ ದಾತಾರ್, ಸಹರಾ ಮುಖ್ಯಸ್ಥರು ಸಲ್ಲಿಸಿದ ಪ್ರಸ್ತಾವನೆಯಲ್ಲಿ ವಿರೋಧಿಸಿದರು. ಪ್ರತಿ ಸಾರಿ ಪ್ರಕ್ರಿಯೆ ಆರಂಭವಾದಾಗ ಅದನ್ನು ವಿಳಂಬ ಮಾಡಲು ಸಹರಾ ಗ್ರೂಪ್ ಏನಾದರೊಂದು ಆಕ್ಷೇಪಣೆ ಹೊತ್ತು ಬರುತ್ತದೆ. ಇದು ಜಾಗತಿಕ ಮಟ್ಟದಲ್ಲಿ ನಡೆಯುವ ಹರಾಜು ಪ್ರಕ್ರಿಯೆಯಾಗಿದ್ದು, ಆಸಕ್ತರು ವಿಶ್ವಾದ್ಯಂತದಿಂದ ಹರಾಜಿನಲ್ಲಿ ಭಾಗವಹಿಸುತ್ತಾರೆ. ಹರಾಜು ಪ್ರಕ್ರಿಯೆಯನ್ನು ಆರಂಭಿಸಲು ಈಗಾಗಲೇ 4.4 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದರು.