ನನ್ನ ವಿರುದ್ಧದ ಆರೋಪಗಳಿಂದ ನಾನು ತುಂಬಾ ದುಃಖಿತನಾಗಿದ್ದೇನೆ. 2014ರಲ್ಲಿ ನಾನು ಸ್ವಯಂ ಪ್ರೇರಿತನಾಗಿ ಆಡಳಿತ ಮಂಡಳಿಯಿಂದ ಹೊರ ಬಂದಿದ್ದು, ನನ್ನ ಮಕ್ಕಳಿಗಾಗಿ ನಾನು ಯಾವುದೇ ಅಧಿಕಾರ, ಹಣ ಅಥವಾ ಸ್ಥಾನಮಾನ ಕೇಳಿಲ್ಲ. ಕಾರ್ಪೋರೇಟ್ ಆಡಳಿತದ ಗುಣಮಟ್ಟ ಕುಸಿಯದಂತೆ ನೋಡಿಕೊಳ್ಳಬೇಕು ಎಂಬ ವಿಚಾರವನ್ನು ಮಾತ್ರ ನಾನು ಇನ್ಫೋಸಿಸ್ ಮಂಡಳಿಯ ಗಮನಕ್ಕೆ ತಂದಿದ್ದೇನೆ ಎಂದು ಮೂರ್ತಿ ಅವರು ಇ-ಮೇಲ್ ಮೂಲಕ ಸ್ಪಷ್ಟಪಡಿಸಿದ್ದಾರೆ.