ಫೆಬ್ರವರಿ 23ರಂದು ಗವರ್ನರ್ ಅವರ ಇಮೇಲ್ ಗೆ ಬೆದರಿಕೆ ಕರೆ ಬಂದಿತ್ತು. ಅದರಲ್ಲಿ ಗವರ್ನರ್ ಹುದ್ದೆಯನ್ನು ತೊರೆಯದಿದ್ದರೆ ಊರ್ಜಿತ್ ಪಟೇಲ್ ಮತ್ತು ಅವರ ಕುಟುಂಬದವರಿಗೆ ತೊಂದರೆ ನೀಡುವುದಾಗಿ ಬೆದರಿಕೆಯೊಡ್ಡಲಾಗಿತ್ತು. ಪಟೇಲ್ ಇಮೇಲ್ ನ್ನು ಆರ್ ಬಿಐ ಹಿರಿಯ ಅಧಿಕಾರಿಗೆ ಫಾರ್ವರ್ಡ್ ಮಾಡಿದರು. ಅವರು ಮುಂಬೈ ಸೈಬರ್ ಅಪರಾಧ ವಿಭಾಗದ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದರು. ತನಿಖೆ ವೇಳೆ, ನಾಗ್ಪುರದ ಸೈಬರ್ ಕೆಫೆಯೊಂದರಿಂದ ಇಮೇಲ್ ಬಂದಿರುವುದು ಎಂದು ಗೊತ್ತಾಯಿತು.