ಕಾಮನ್ ಮ್ಯಾನ್ ಗೆ ಅಚ್ಛೇ ದಿನ್: ಕಳೆದ 1 ವರ್ಷದಲ್ಲಿ ಬೇಳೆಕಾಳುಗಳ ಬೆಲೆಯಲ್ಲಿ ಶೇ.30ರಷ್ಟು ಇಳಿಕೆ

ಹಣ ದುಬ್ಬರದ ಒತ್ತಡದ ನಡುವೆ ಸಾಮಾನ್ಯ ವ್ಯಕ್ತಿ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಒಂದು ವರ್ಷದಲ್ಲಿ ಬೇಳೆ ಕಾಳುಗಳ ಬೆಲೆಯಲ್ಲಿ ಶೇ.30 ರಷ್ಟು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಹಣ ದುಬ್ಬರದ ಒತ್ತಡದ ನಡುವೆ ಸಾಮಾನ್ಯ ವ್ಯಕ್ತಿ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಒಂದು ವರ್ಷದಲ್ಲಿ ಬೇಳೆ ಕಾಳುಗಳ ಬೆಲೆಯಲ್ಲಿ ಶೇ.30 ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸಂಪುಟ ಕಾರ್ಯದರ್ಶಿ ಪಿ.ಕೆ ಸಿನ್ಹಾ ನೇತೃತ್ವದ ಕಾರ್ಯದರ್ಶಿಗಳ ಸಮಿತಿ ಈ ವಿಷ ತಿಳಿಸಿದೆ. ಈ ಬಾರಿ ಕಡಲೆಬೇಳೆಯ ಬಂಪರ್ ಬೆಳೆಯಿಂದಾಗಿ ಅದರ ಬೆಲೆಕೂಡ ಕಡಿಮೆಯಾಗಲಿದೆ ಎಂದು ಹೇಳಿದೆ. ಈ ಬಾರಿಯ ಖಾರಿಫ್ ಸೀಸನ್ ನಲ್ಲಿ  ದಾಖಲೆಯ ಪ್ರಮಾಣದಲ್ಲಿ ಖರೀದಿ ನಡೆದಿದೆ ಎಂದು ತಿಳಿಸಿದೆ.

ಪ್ರಸಕ್ತ ಖಾರಿಫ್ ಸೀಸನ್ ನಲ್ಲಿ ಪ್ರತಿ ಕೆಜಿಗೆ 50.50 ರು. ಬೆಂಬಲ ನೀಡಿ ರೈತರಿಂದ 8 ಲಕ್ಷ ಟನ್ ಬೇಳೆಕಾಳುಗಳನ್ನು ಖರೀದಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷ ಬೇಳೆಕಾಳು ಗಳ ಬೆಲೆ ಶೇ. 30 ರಷ್ಟು ಇಳಿದಿದೆ ಎಂದು ಸಮಿತಿ ತಿಳಿಸಿದೆ.

ದಾಖಲೆಯ ಪ್ರಮಾಣದಲ್ಲಿ ಕಡಲೆ ಕಾಳು ಬೆಳೆ ಉತ್ಪಾದನೆಯಾಗಿರುವುದಿಂದ ಈ ಬಾರಿ ರಾಬಿ ಸೀಸನ್ ನಲ್ಲಿ ಕಡಲೆ ಬೇಳೆ ಬೆಲೆ ಕಡಿಮೆಯಾಗಲಿದೆ ಎಂದು ತಿಳಿಸಿದೆ. ಬೇಳೆಯ ಬೆಲೆ ಪ್ರತಿ ಕೆಜಿಗೆ 200 ರು ತಲುಪಿದ್ದ ಹಿನ್ನೆಲೆಯಲ್ಲಿ ಸರ್ಕಾರ 20 ಲಕ್ಷ ಟನ್ ಬಫ್ಫರ್ ಸ್ಟಾಕ್ ಗೆ ಅವಕಾಶ ನೀಡಿದೆ.

2016-17 ರ ಸಾಲಿನಲ್ಲಿ  ಸುಮಾರು 22 ಮಿಲಿಯನ್ ಟನ್ ಬೇಳೆಕಾಳುಗಳ ಉತ್ಪಾದನೆಯಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ 16.5 ಮಿಲಿಯನ್ ಟನ್ ಉತ್ಪಾದನೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com