ಅದಾನಿ ಸಮೂಹವನ್ನು ರಕ್ಷಣಾ ಸಚಿವಾಲಯವು ಆಯ್ಕೆ ಮಾಡದೇ ಹೋದರೆ ಏನಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಬಸ್ಖೆ ಅವರು, ರಕ್ಷಣಾ ಯೋಜನೆಗೆ ಅದಾನಿ ಸಮೂಹವು ಉತ್ತಮ ಪಾಲುದಾರ ಎಂದು ನಾವು ನಂಬಿದ್ದೇವೆ. ಅದಾನಿ ಸಮೂಹ ಆಯ್ಕೆಯಾಗದು ಎಂಬ ಅನುಮಾನ ಇದ್ದಿದ್ದರೆ ನಾವು ಮುಂದಡಿ ಇಡುತ್ತಲೇ ಇರಲಿಲ್ಲ ಎಂದು ತಿಳಿಸಿದ್ದಾರೆ.