ದೀರ್ಘಕಾಲೀನ ಆರ್ಥಿಕ ಉಪಯೋಗಕ್ಕಾಗಿತಕ್ಷಣದ ಆರ್ಥಿಕ ಸಂಕಷ್ಟವು ಪರಿಹಾರವಲ್ಲ: ರಘುರಾಮ್ ರಾಜನ್

ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಪನಗದಿಕರಣದ ಬಗೆಗೆ ಕಡೆಗೂ ಮೌನ ಮುರಿದಿದ್ದಾರೆ.
ರಘುರಾಮ್ ರಾಜನ್
ರಘುರಾಮ್ ರಾಜನ್
Updated on
ನವದೆಹಲಿ: ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಪನಗದಿಕರಣದ ಬಗೆಗೆ ಕಡೆಗೂ ಮೌನ ಮುರಿದಿದ್ದಾರೆ. ತನ್ನ 'ಐ ಡೂ ವಾಟ್ ಐ ಡೂ: ಆನ್ ರಿಫಾರ್ಮ್, ರೆಟೋರಿಕ್ ಆಂಡ್ ರಿಸಾಲ್ವ್'  ಪುಸ್ತಕದಲ್ಲಿ ರಾಜನ್ ಮೋದಿ ಸರ್ಕಾರದ ಮಹತ್ವದ ತೀರ್ಮಾನವಾಗಿದ್ದ ಅಪನಗದಿಕರಣ ಕುರಿತು ಬರೆದುಕೊಂಡಿದ್ದಾರೆ.
ಹಿಂದೂಸ್ಥಾನ್ ಟೈಮ್ಸ್ ವರದಿಯಲ್ಲಿ ಹೇಳಿದಂತೆ, ದೀರ್ಘಕಾಲೀನ ಆರ್ಥಿಕ ಉಪಯೋಗಕ್ಖಾಗಿ ತಕ್ಷಣದ ಆರ್ಥಿಕ ಸಂಕಷ್ಟವು ಪರಿಹಾರವಲ್ಲ ಎಂದು ರಾಜನ್ ನುಡಿದಿದ್ದಾರೆ. ಈ ಮುಖೇನ ರಾಜನ್ ಅಪನಗದಿಕರಣ ಕ್ರಮದ ಕುರಿತು ಅಸಮಾಧಾನವನ್ನು  ಹೊಂದಿದ್ದಾರೆ ಎನ್ನಲಾಗಿದೆ.
ಟೈಮ್ಸ್ ಆಫ್ ಇಂಡಿಯಾ ಗೆ ನೀಡಿದ ಸಂದರ್ಶನದಲ್ಲಿ, ರಾಜನ್ ತಮ್ಮ ಅಧಿಕಾರಾವಧಿಯಲ್ಲಿ ಯಾವ ಕಾರಣಕ್ಕೂ ಅಪನಗದಿಕರಣವನ್ನು ಜಾರಿ ಮಾಡುವುದರ ಕುರಿತಂತೆ ತೀರ್ಮಾನಿಸಿರಲಿಲ್ಲ ಎಂದಿದ್ದಾರೆ.
ಕಳೆದ ವರ್ಷ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು 1000 ಮತ್ತು 500 ರೂ.ನೋಟು ಗಳನ್ನು ಅಮಾನ್ಯಗೊಳಿಸಿದ್ದರು. ಇದನ್ನು ಅವರು ಕಪ್ಪು ಹಣದ ವಿರುದ್ಧವಾಗಿ 'ಸರ್ಜಿಕಲ್ ಸ್ಟ್ರೈಕ್' ಎಂದು ಘೋಷಿಸಿದ್ದರು. ಆರ್ ಬಿಐ ನ ಇತ್ತೀಚಿನ ವರದಿಯಲ್ಲಿ ಅಪನಗದಿಕರಣದಿಂದ ರದ್ದಾದ ಶೇ. 99 ನೋಟುಗಳು ಬ್ಯಾಂಕ್ ಗೆ ಮರಳಿದೆ ಎನ್ನಲಾಗಿತ್ತು.
ರಘುರಾಮ್ ರಾಜನ್ ಕಳೆದ ವರ್ಷ ಸೆಪ್ಟೆಂಬರ್ 5 ರಂದು ಆರ್ ಬಿಐ ಗವರ್ನರ್ಹುದ್ದೆಯಿಂದ ನಿವೃತ್ತರಾಗಿದ್ದರು. ಮುಂದಿನ ವಾರ ಬಿಡುಗಡೆ ಆಗಲಿರುವ ಅವರ ಇತ್ತೀಚಿನ ಪುಸ್ತಕ ಅವರು ಆರ್ ಬಿಐ ಗವರ್ನರ್ ಆಗಿದ್ದಾಗ ನೀಡಿದ್ದ ವಿಶೇಷ ಭಾಷಣಗಳ ಸಂಕಲನವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com