ವಾಣಿಜ್ಯ
ಜಿಎಸ್ ಟಿ, ನೋಟು ನಿಷೇಧದ ತಾತ್ಕಾಲಿಕ ಪರಿಣಾಮ ಮುಗಿದಿದೆ: ಅರವಿಂದ್ ಸುಬ್ರಹ್ಮಣಿಯನ್
2018-19 ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡನೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್, ಜಿಎಸ್ ಟಿ, ನೋಟು ನಿಷೇಧದ ತಾತ್ಕಾಲಿಕ ಪರಿಣಾಮ...
ನವದೆಹಲಿ: 2018-19 ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡನೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್, ಜಿಎಸ್ ಟಿ, ನೋಟು ನಿಷೇಧದ ತಾತ್ಕಾಲಿಕ ಪರಿಣಾಮ ಮುಗಿದಿದೆ ಎಂದು ಹೇಳಿದ್ದಾರೆ.
ಈ ವರ್ಷ ತೈಲ ದರ ಏರಿಕೆಯಾಗಿದ್ದು ಬಳಕೆ ಹಾಗೂ ಸರ್ಕಾರದ ಖರ್ಚಿನ ಮೇಲೆ ಪರಿಣಾಮ ಬೀರಿದ್ದು ಸ್ತವಿಕ ಆರ್ಥಿಕ ಚಟುವಟಿಕೆಗೆ ಅಡ್ಡಿ ಉಂಟುಮಾಡಿದೆ ಎಂದು ಅರವಿಂದ್ ಸುಬ್ರಹ್ಮಣಿಯನ್ ಹೇಳಿದ್ದು, 4R ( Recognition, Resolution, Recapitalisation and Reforms) ಮಂತ್ರವನ್ನೊಳಗೊಂಡು ಟಿಬಿಎಸ್ (ಟ್ವಿನ್ ಬ್ಯಾಲೆನ್ಸ್ ಶೀಟ್) ಸವಾಲನ್ನು ಎದುರಿಸುತ್ತಿದ್ದೇವೆ, ಈಗಿನ ವರೆಗೆ ಎಲ್ಲಾ 4 ವಿಭಾಗಗಳಲ್ಲಿಯೂ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಮುಖ್ಯ ಆರ್ಥಿಕ ಸಲಹೆಗಾರರು ಹೇಳಿದ್ದಾರೆ.
ಇದೇ ವೇಳೆ ಜಿಎಸ್ ಟಿ ಹಾಗೂ ನೋಟು ನಿಷೇಧದ ಬಗ್ಗೆಯೂ ಮಾತನಾಡಿರುವ ಅವರು, ಜಿಎಸ್ ಟಿ ಹಾಗೂ ನೋಟು ನಿಷೇಧದ ತಾತ್ಕಾಲಿಕ ಪರಿಣಾಮ ಮುಗಿದಿದೆ, ನಮ್ಮ ಆರ್ಥಿಕತೆಗೆ ಹೊಸ ನೀತಿಗಳು ಬೇಕಿಲ್ಲ, ಈಗ ಪ್ರಾರಂಭಿಸಿರುವುದನ್ನೇ ಮುಕ್ತಾಯಗೊಳಿಸಬೇಕಿದೆ ಅಷ್ಟೇ ಎಂದು ಹೇಳಿದ್ದಾರೆ.