ಕಾಫಿ ಡೇ ಸ್ಥಾಪಕ ಸಿದ್ದಾರ್ಥ್ ಪತ್ರದ ವಿಚಾರ: ಅರ್ನ್ಸ್ಟ್ & ಯಂಗ್ ನಿಂದ ತನಿಖೆಗೆ ತೀರ್ಮಾನ

ಕಾಫಿ ಡೇ ಎಂಟರ್‌ಪ್ರೈಸಸ್ ಮಂಡಳಿಯು ಮಾಜಿ ಅಧ್ಯಕ್ಷ ವಿ.ಜಿ. ಸಿದ್ಧಾರ್ಥ ಅವರ ಸಾವಿಗೆ ಮುಂಚಿತವಾಗಿ ಕಂಪನಿಯ ಮಂಡಳಿಯ ಸದಸ್ಯರು ಮತ್ತು ಉದ್ಯೋಗಿಗಳಿಗೆ....
ಕಾಫಿ ಡೇ
ಕಾಫಿ ಡೇ
Updated on

ಚಿಕ್ಕಮಗಳೂರು: ಕಾಫಿ ಡೇ ಎಂಟರ್‌ಪ್ರೈಸಸ್ ಮಂಡಳಿಯು ಮಾಜಿ ಅಧ್ಯಕ್ಷ ವಿ.ಜಿ. ಸಿದ್ಧಾರ್ಥ ಅವರ ಸಾವಿಗೆ ಮುಂಚಿತವಾಗಿ ಕಂಪನಿಯ ಮಂಡಳಿಯ ಸದಸ್ಯರು ಮತ್ತು ಉದ್ಯೋಗಿಗಳಿಗೆ ಬರೆದಿರುವ ಪತ್ರದ ಕುರಿತಂತೆ  ತನಿಖೆ ನಡೆಸಲು ಅರ್ನ್ಸ್ಟ್ & ಯಂಗ್ (ಇವೈ ) ಅವರನ್ನು ನೇಮಕ ಮಾಡಿದೆ.

ಕಂಪನಿಯ ಮತ್ತು ಅದರ ಅಂಗಸಂಸ್ಥೆಗಳ ಖಾತೆಗಳ ಪುಸ್ತಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಇವೈಗೆ ಕೋರಲಾಗಿದೆ ಎಂದು ಕಾಫಿ ಡೇ ಹೇಳಿಕೆಯಲ್ಲಿ ತಿಳಿಸಲಾಗಿದೆ. ಗುರುವಾರ ಸುಮಾರು ಗಂಟೆಗಳ ಸುದೀರ್ಘ ಕಾಲ ನಡೆದ ಮಂಡಳಿಯ ಸಭೆ ತರುವಾಯ ಈ ಹೇಳಿಕೆ ಬಿಡುಗಡೆಯಾಗಿದೆ.
"ಕಾರ್ಯತಂತ್ರದ ನಿರ್ದೇಶನ ಮತ್ತು ಭವಿಷ್ಯದಲ್ಲಿ ಸೂಕ್ತವಾದ ಮಾರ್ಗವನ್ನು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಮಧ್ಯಸ್ಥಗಾರರಿಗೆ ಕೆಲಸ ನೀಡಬೇಕೆಂದು ಮಂಡಳಿ ನಿರ್ಧರಿಸಿದೆ. ಇದನ್ನು ಸಾಧಿಸಲು ಶ್ರೇಷ್ಠ ವ್ಯಕ್ತಿ ಅಥವಾ ಹೆಸರಾಂತ ಸಂಸ್ಥೆಯನ್ನು ಕಾರ್ಯತಂತ್ರದ ಸಾಂಸ್ಥಿಕ ಸಲಹೆಗಾರ / ಮಂಡಳಿಗೆ ನೇಮಕ ಮಾಡಲು ನಿರ್ಧರಿಸಲಾಯಿತು, ”ಎಂದು ಅದು ಹೇಳಿದೆ.
ಹಿಂದಿನ ಮಂಡಳಿ ಸಭೆಯಲ್ಲಿ ರಚಿಸಲಾದ ಕಾರ್ಯಕಾರಿ ಸಮಿತಿಯ ಹೆಚ್ಚುವರಿ ಸದಸ್ಯರಾಗಿ ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರನ್ನು ನೇಮಿಸಲಾಗಿತ್ತು.
ಆಡಳಿತ ಮಂಡಳಿ ಹಿರಿಯರು, ಆಡಿಟರ್​ಗಳು ಮತ್ತು ಮಂಡಳಿಯ ಗಮನಕ್ಕೆ ಬಾರದೆ ಇರುವ ಹಣಕಾಸು ವ್ಯವಹಾರಗಳು ಕುರಿತು ವಿ.ಜಿ.ಸಿದ್ಧಾರ್ಥ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿನ ಅಂಶಗಳ ಕುರಿತಾಗಿ ಕಂಪನಿಯು ಗಂಭೀರವಾಗಿ ಪರಿಗಣಿಸಿ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com