ರಾಜಸ ತಪ ರಾಜಾಧಿರಾಜ ಸುರೇಂದ್ರನಿಗೆ ಭಯ ಹುಟ್ಟಿಸಿತು. ಸಾಧಾರಣ ಬಿಸಿಯಲ್ಲ ಅದು, ಮಹರ್ಷಿಯ ಮಹತ್ವದ ಸುಡುವಿಕೆ. ಅದು ಮಹರ್ಷಿ ತಪಸ್ಸು. 'ಹೀಗಿದು ಮುಂದುವರೆದುಬಿಟ್ಟರೆ, ಬ್ರಹ್ಮ ಬಂದೇ ಬಿಟ್ಟರೆ, ಬ್ರಹ್ಮರ್ಷಿತ್ವ ಕೊಟ್ಟೇ ಬಿಟ್ಟರೆ... ಏನಾದರೂ ಮಾಡಿ ವಿಶ್ವಮಿತ್ರರ ತಪೋ ಭಂಗ ಮಾಡಬೇಕು. ಹಿಂದೆ ಮೇನಕೆಯನ್ನು ಕಳಿಸಿ ಅವನ ತಪಃಶಕ್ತಿಯನ್ನೆಲ್ಲ ಬರಿದು ಮಾಡಿಬಿಟ್ಟೆ. ಈಗ ? ಈಗ ಮತ್ತೆ ಮೇನಕೆ ಸರಿಹೋಗಳು. ಯಾರನ್ನು ಕಳಿಸೋಣ? ರಂಭೆ! ರಂಭೆ ಸ್ವರ್ಗ ಗಣಿಕೆಯರ ಅಧ್ಯಕ್ಷಿಣಿ. ಅವಳನ್ನೇ ಕಳಿಸೋಣ. ಅವಳಿಗೆ, ಅವಳ ವೈಯ್ಯಾರಕ್ಕೆ, ಅವಳ ಅಂದಕ್ಕೆ, ಅವಳ ಮಾರ್ದವತೆಗೆ ಒಳಗಾಗದವರಾರು? ಯೋಚನೆಯನ್ನು ಕಾರ್ಯರೂಪಕ್ಕೆ ತಂದೇ ಬಿಟ್ಟ. ರಂಭೆ ಬಂದಳು. ಅವಳಿಗೆ ಸೂಚಿಸಿದ ಇಂದ್ರ, " ರಂಭೆ, ಏನಾದರೂ ಮಾಡಿ ವಿಶ್ವಮಿತ್ರರಿಗೆ ಕಾಮ ವಿಕಾರ ಉಂಟಾಗುವಂತೆ ಮಾಡಬೇಕು. "