"ಜಿತೇಂದ್ರಿಯತ್ವ ಬಹಳ ಕಷ್ಟ. ನಾನಂದುಕೊಂಡಿದ್ದೆ, ನಾನು ಜಿತೇಂದ್ರಿಯ’. ಉಡುಗೆ, ಆಹಾರ, ಮನರಂಜನೆ, ಎಲ್ಲದರ ಮೇಲೂ ಜಯ ಸಾಧಿಸಿದ್ದೆ. ಇಂದ್ರ ನನ್ನ ತಪಸ್ಸನ್ನು ಭಂಗಗೊಳಿಸಲು ಕಳಿಸಿದ್ದ ಅಪ್ಸರ ಸ್ತ್ರೀಯರನ್ನೂ ಅಲಕ್ಷಿಸಿಬಿಟ್ಟಿದ್ದೆ. ನನ್ನ ಚಿತ್ತವನ್ನು ಅಲ್ಲಾಡಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಗರ್ವದಲ್ಲಿದ್ದೆ. ಹಿಂದೆ ನಿನ್ನಲ್ಲಿಗೆ ಬಂದಿದ್ದಾಗ ನಿನ್ನೊಡನೆ ಸಂಭಾಷಿಸುತ್ತಿದ್ದಾಗ, ಸೌಂದರ್ಯ ರಾಶಿಯೊಂದು, ಮೃದು ಮಾತಿನ ಮೋಹಿನಿಯೊಂದು, ಕಮಲ ಕಣ್ಣಿನ ಹಿಡಿ ಸೊಂಟದ ಹುಡುಗಿಯೊಬ್ಬಳು ಬಂದಳು. ನನ್ನ ಸಂಯಮವೆಲ್ಲ ಸೋತುಹೋಯಿತು. ಅವಳು, ಆ ಚಿತ್ತಾಪಹಾರಕಿ, ಮುಂದೆ ಬಂದು ನಿನ್ನ ಸೂಚನೆಯಂತೆ ಪಾದಾಭಿವಂದನ ಮಾಡಿದಳು.