ಅಧೀರನಾಗುತ್ತಿದ್ದ ಗಂಡನ ಕೈ ಹಿಡಿದು ಬೇಡಿದಳು ರಾಣಿ, " ಸ್ವಾಮಿ, ನಿಮ್ಮದು ಸತ್ಯವ್ರತ. ವರುಣ ಪ್ರಕರಣದ ನಂತರ ನೀವು ಅಗ್ನಿ ಸಾಕ್ಷಿಕವಾಗಿ ಪ್ರಮಾಣ ಮಾಡಿದ್ದೀರಿ; ಯಾವುದೇ ಕಾರಣದಿಂದ ಸುಳ್ಳು ಹೇಳುವುದಿಲ್ಲ ಎಂದು. ಈಗ ಮುಂದೇನಾಗುವುದೋ, ಯಾರಿಗೇನು ಕೇಡಾಗುವುದೋ, ಮಂತ್ರಿಗೋ, ಮಗನಿಗೋ, ರಾಜ್ಯಕ್ಕೋ, ಸ್ವತಃ ನಿಮಗೋ ತೊಂದರೆಯಾಗಬಹುದೇನೋ. ದಯವಿಟ್ಟು ಯಾವುದೇ ಕಾರಣವಿದ್ದರೂ ಮಾತಿಗೆ ಮಾತ್ರ ತಪ್ಪಬೇಡಿ. ಎರಡು ಮಾತು ನಿಮ್ಮಿಂದ ಬರದಿರಲಿ. ಈ ವರ ನೀಡಿ ನನಗೆ"