ಅಯೋಮಯ ಸ್ಥಿತಿ ಹರಿಶ್ಚಂದ್ರನದು. ರಾಜಾಧಿರಾಜನಾಗಿದ್ದ ತನ್ನದೀಗ ಬರಿಗೈ. ಪ್ರಾಣಿಗಳ ಉಪಟಳ, ಪರಿಹಾರಕ್ಕೆ ಬೇಟೆ, ಯಾವುದೋ ಕಾಡು ಹಂದಿ, ಬಳಲಿಕೆ, ದುಸ್ವಪ್ನ, ಕಾಡಿನ ಮಧ್ಯೆ ಪ್ರತ್ಯಕ್ಷವಾದ ಗಾಯಕಿಯರು, ಮದುವೆಯಾಗಲು ಒತ್ತಾಯ, ತನ್ನ ಶಿಸ್ತು... ಏನಿದೆಲ್ಲ... ಯೋಚಿಸುತ್ತಿದ್ದಾಗ ವಿಶ್ವಮಿತ್ರರು ಕೇಳುತ್ತಿದ್ದಾರೆ, " ಏನೇನನ್ನೆರೆದೆ?." ಹರಿಶ್ಚಂದ್ರ ಹೇಳಿದ, " ಚತುರಂಗ ಸೇನೆ, ಸಕಲ ಭಂಡಾರ, ನಿಜರಾಜಧಾನಿ, ಜಗದಾಣೆ ಘೋಷಣೆ, ಏಳು ದ್ವೀಪಗಳನ್ನೂ ಆನಂದದಿಂದ ಇತ್ತೆನು. "