ಮಂತ್ರಿ ಸುಮಂತ್ರ ದಶರಥನ ಆಪ್ತ, ಸಾರಥಿ, ಸ್ನೇಹಿತ. ಆತನಲ್ಲಿ ಎಂದೋ ಮಾಡಬೇಕಿದ್ದ ಸಮಾಲೋಚನೆಯನ್ನು ಈಗ ಮಾಡಿದ. ಸುಮಂತ್ರನೆಂದ, "ಪುತ್ರ ಬೇಕಿದ್ದರೆ ಪುತ್ರ ಕಾಮೇಷ್ಠಿ ಮಾಡಬೇಕು" (ಇಷ್ಠಿ, ಎಂದರೆ ಇಷ್ಟವನ್ನು, ಬಯಕೆಯನ್ನು ಪೂರೈಸಲು ಮಾಡುವ ಅಗ್ನಿ ಪೂಜೆ. ಯಾವ ಆಸೆಯೋ, ಅದರ ಕಾಮ, ಇಷ್ಠಿ ಆಗುತ್ತದೆ. ವಿದ್ಯೆಯನ್ನು ಕಲಿಯುವ ಆಸೆಯಿದ್ದರೆ ಅದು ಙ್ಞಾನ ಕಾಮ ಇಷ್ಟಿ. ಹಣ ಗುರಿಯಾಗಿದ್ದರೆ ಆಗದು ಧನ ಕಾಮೇಷ್ಠಿ... ಹೀಗೆ. ಈಗ ದಶರಥನಿಗೆ, ಕೇವಲ ಸಂತಾನವಲ್ಲ, ಮಗನೇ ಆಗಬೇಕಾದ್ದರಿಂದ ಅದು ಪುತ್ರ ಕಾಮೇಷ್ಠಿ.