ಕಥೆ ಮುಗಿಸುತ್ತ ಸುಮಂತ್ರ ಹೇಳಿದ; ಋಷ್ಯಶೃಂಗನಿಗೆ ಶಾಂತೆಯೊಡನೆ ವಿವಾಹವೂ ಆಯಿತು; ಆಕೆ ನಿಧಾನವಾಗಿ ಅನಂಗಶಾಸ್ತ್ರವನ್ನೂ ಪರಿಚಯ ಮಾಡಿಕೊಟ್ಟಳು. ಇದೀಗ ಋಷಿ ಸಂಸಾರಿ, ಮನೆ ಅಳಿಯ, ಶಾಂತಾ ವಲ್ಲಭ, ಮಗ ಬೇರೆ ಹುಟ್ಟಿಬಿಟ್ಟ ". ದಶರಥ ಕೇಳಿದ, " ವಿಭಾಂಡಕ? ". ಸುಮಂತ್ರ ಅಖಚಿತವಾಗಿ ಹೇಳಿದ, " ಆನಂತರ ಸಿಟ್ಟುಕೊಂಡು ಬಂದರಂತೆ, ರೋಮಪಾದರನ್ನು ಕಂಡು ಗುಡುಗಿದರಂತೆ, ಆದರೆ ತುಂಬ ಸುಖವಾಗಿ, ಶಾಂತವಾಗಿರುವ ಶಾಂತಾನುರಕ್ತನನ್ನು ಕಂಡು, ಮಗನ ಸಂತೋಷವೇ ತಮ್ಮ ಸಂತೋಷವೆಂದು ಹೋಗಿಬಿಟ್ಟರಂತೆ.