(ಆಸಕ್ತ ಓದುಗರೇ, ಇನ್ನು ಮುಂದೆ ಅಂದಂದಿನ ದಿನಕ್ಕೊಂದು ಬಿಡುವಿಲ್ಲದೇ , ಕಥಾಸ್ವಾದನೆಗೆ ಪಾನಕದ ಪುಳ್ಳೆಯಾಗದಂತೆ ಕಥೆ ಓಡುತ್ತದೆ . ಏನಾದರೂ ವಿವರಣೆ ಕೊಡಬೇಕಿದ್ದರೆ , ವ್ಯಕ್ತಪಡಿಸಿರುವ ಶಂಕೆಗೆ ಸಮಾಧಾನ ಕೊಡುವ ಅವಶ್ಯಕತೆಯಿದ್ದರೆ ಮಾತ್ರ ನಾನು ಅಲ್ಲಲ್ಲಿ ಮೂಗು ಹಾಕುತ್ತೇನೆ. ತಮಗೆ ರಾಮಾಯಣದ ಬಗೆಗೆ ಯಾವುದೇ ಸಂದೇಹಗಳಿದ್ದರೂ , ಯಾರಾದರೂ ವ್ಯಕ್ತಪಡಿಸಿರುವ ವಿರೋಧಗಳಿಗೆ ಪರಿಹಾರ ಬೇಕಿದ್ದರೂ ದಯವಿಟ್ಟು ಕನ್ನಡಪ್ರಭ.ಕಾಂ ಗೆ ಪತ್ರ ಬರೆಯಿರಿ . ಒಂದು ಅಂಶವನ್ನು ಹೇಳಿಬಿಡುವ . ಶ್ರೀಮದ್ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲದ್ದು ಇಲ್ಲಿ ಏನೂ ದಾಖಲಾಗುವುದಿಲ್ಲ . ಕೆಲವು ಸಂದರ್ಭಗಳಲ್ಲಿ ಮಾತ್ರ ಸಂದರ್ಭ ಪುಷ್ಟಿಗಾಗಿ ಮತ್ತು ಆದಿಕವಿ ಕೊಟ್ಟ ಸೂಚನೆಯನ್ನು ಸಂಪೂರ್ಣ ಮಾಡುವ ಏಕೈಕ ಕಾರಣದಿಂದಾಗಿ, ಅನ್ಯಮೂಲಗಳಿಂದ ತಾತ್ಪೂರ್ತಿಕವಾಗಿ ಸೇರಿಸಲಾಗುತ್ತದೆ ಎಂಬ ಆಶ್ವಾಸನೆಯೊಂದಿಗೆ ಈ ಸಂಚಿಕೆ ಮುಗಿಸುತ್ತಿರುವೆ)