ಬ್ರಹ್ಮ ಹತ್ತಿರಕ್ಕೆ ಬರುವ ಹೊತ್ತಿಗೆ ಕುಂಭಕರ್ಣನ ಮುಖದಲ್ಲಿ ಆಕಳಿಕೆ. ಕಣ್ಣು ಬಿಡಲೇ ಆಗುತ್ತಿಲ್ಲ. ಮೊಂಕು, ಮಂಪರು, ತಾನು ಏನೇನೋ ಲೆಕ್ಕಾಚಾರ ಹಾಕಿದ್ದ. ಬ್ರಹ್ಮ ಕಾಣುತ್ತಿದ್ದಂತೆಯೇ ತಾನೇನು ಕೇಳಬೇಕು, ಅಣ್ಣನಂತೆ ತಾನೆಂತು ಜಾಣನಾಗಬೇಕು, ಹೇಗೆ ಬ್ರಹ್ಮನ ಬಣ್ಣನೆಯ ಮಾತುಗಳನ್ನು ನುಂಗಬೇಕು... ಎಂದೆಲ್ಲ ಯೋಚಿಸಿದ್ದ. ಆದರೆ ಏಕೆ, ಏಕೆ ತನಗೆ ನಿದ್ದೆಯ ತೀವ್ರ ಅನಿಸಿಕೆ ? " ಕುಂಭಕರ್ಣ ತೀವ್ರ ಬಳಲಿದ್ದಿಯೇ, ತಪದಿಂದ ಬಸವಳಿದಿದ್ದೀಯೆ. ಕೇಳು. ಏನು ವರ ಕೊಡಲಿ ನಿನಗೆ? " ಎಲ್ಲೋ ಬಾವಿಯ ಆಳದಿಂದ ದನಿಬಂದಂತೆ, ನಿದ್ದೆಗೆ ಜಾರುತ್ತಿದ್ದಾನೆ, " ಬ್ರಹ್ಮದೇವ, ನನಗೆ ತುಂಬ ನಿದ್ದೆ, ತುಂಬ ಕಾಲ ನಿದ್ದ ಮಾಡಬೇಕೆನಿಸುತ್ತಿದೆ "