ಅನರಣ್ಯನ ಮುಂದೆ ತೊದಲುತ್ತಿದ್ದ ಸಚಿವನನ್ನು ದುರುಗುಟ್ಟಿ ನೋಡಿದ ರಾಜ. " ಏಕೆ ಹೀಗೆ ಭೂತ ಕಂಡಂತೆ ನಡಗುತ್ತಿದ್ದೀರಿ? ಏಕೆ ?". ನಡುಗುತ್ತಲೇ ನುಡಿದ ಸಚಿವ, " ಕ್ಷಮಿಸಿ ಮಹಾಸ್ವಾಮಿ, ಭೂತವಲ್ಲ ಭೇತಾಳ ಕಂಡಿದ್ದರೂ ಹೆದರುತ್ತಿರಲಿಲ್ಲ, ಆದರೆ ಭೂತ, ಪಿಶಾಚ, ನರ, ಮುನಿ, ದೈವ, ನಾಗ, ಗರುಡ, ಎಲ್ಲ ದೇವ ದಾನವರ ಮೃತ್ಯುವಾದ ರಾವಣ ಬರುತ್ತಿದ್ದಾನೆ.