ಮಿಥಿಲೆಯೊಂದು ರಾಜ್ಯ, ಅದಕ್ಕೆ ಅಧಿಪತಿ ಜನಕ. ಜನಕನಿಗೆ ಯಙ್ಞಾಕಾಂಕ್ಷೆ. ಅಲ್ಲಿಗೀಗ ಹೋಗಬೇಕಿದೆ. ನೀನೂ ನಮ್ಮೊಡನೆ ಬಾ. ಆ ರಾಜನ ಬಳಿ ಒಂದು ದಿವ್ಯವಾದ ಬಿಲ್ಲಿದೆ, ನೋಡಲು ಆಕರ್ಷಕವಾಗಿದೆ. ಹಿಂದಿನ ಯಙ್ಞದಲ್ಲಿ ದೇವತೆಗಳು ಹಿಂದಿನ ಜನಕನಿಗೆ ಧನುಸ್ಸನ್ನು ಕೊಟ್ಟಿದ್ದಾರೆ. ಮಹಾ ಶಕ್ತಿಶಾಲಿ ಧನುಸ್ಸದು; ನೋಡಲು ಕಣ್ಣು ಕೋರೈಸುತ್ತದೆ. ದೇವತೆಗಳು, ಗಂಧರ್ವರು, ಅಸುರರು, ರಾಕ್ಷಸರು, ಎಲ್ಲ ಪ್ರಯತ್ನಿಸಿದ್ದಾರೆ. ನರಾಧೀಶರು, ಎಷ್ಟೆಷ್ಟೋ ವೀರ್ಯವಂತರು ಅದನ್ನು ಬಗ್ಗಿಸಿ ಹೆದೆ ಏರಿಸಲು ಆಗಿಲ್ಲ!!!