ಯೋಜನೆ ಬಹಳ ಸರಳ. ಸಾಮಾನ್ಯರನ್ನು ಬಿಡಿ, ಅವರ ಪೂಜೆ, ಅದರಲ್ಲವರಿಗಿರುವ ಭಕ್ತಿ, ತನ್ಮೂನಕ ನೈವೇದ್ಯ ಎಂದೂ ಗರಿಷ್ಠವಲ್ಲ. ಆದರೆ ನಿಜವಾಗಿಯೂ ದೇವತೆಗಳು ಕೊಬ್ಬಿರುವುದು ಆಗಾಗ ನಡೆಯುವ ಯಙ್ಞಗಳಿಂದ. ಈ ಯಾಗಗಳನ್ನೇ ನಡೆಯದಂತೆ ಮಾಡಿದರೆ ಹೇಗೆ? ಹೇಗೂ ಈಗ ಯಾಗಗಳು ಹೆಚ್ಚು ನಡೆಯುವುದು ಋಷ್ಯಾಶ್ರಮಗಳಲ್ಲಿ. ಋಷಿಗಳನ್ನೇ ಸಾಯಿಸಿಬಿಟ್ಟರೆ ಯಾಗಗಳು ಹೇಗೆ ನಡೆಯುತ್ತವೆ? ಆದರೆ.... ಅಷ್ಟು ಸುಲಭವಲ್ಲ ಅದು. ವಸಿಷ್ಠರೋ, ವಿಶ್ವಮಿತ್ರರೋ, ಸೂತ್ರಕರೋ, ಸೋಮಕರೋ, ವಾಮದೇವರೋ, ಸುಮದನರೋ, ಅತ್ರಿ ಮಹರ್ಷಿಗಳೋ, ಇಂತಹ ದೊಡ್ಡವರ ಹತ್ತಿರ ಹೋಗಲು ಸಾಧ್ಯವೇ? ಅವರು ಹೂಂಕರಿಸಿದರೆ ಸಾಕು, ನಾವು ಸುಟ್ಟು ಹೋಗುತ್ತೇವೆ.