(ಸುಪುತ್ರ, ವಿದ್ಯಾವಂತ, ವಿನೀತ, ಯೋಗ್ಯ ಮಗ ಬೇಕಿದ್ದರೆ ತಾಯಿ-ತಂದೆಗಳು ತಪಮಾಡಿ ಸಂಯೋಗಗೊಂಡರೆ ಫಲಿತವಾಗಿ ಅಪೇಕ್ಷಿತ ಅತ್ಯುತ್ತಮ ಮಗ ಜನಿಸುತ್ತಾನೆ. ಇದು ವಿವಾಹ ಸಂಸ್ಕಾರ ಆರಂಭಗೊಂಡಂದಿನಿಂದ ಅಸ್ತಿತ್ವಕ್ಕೆ ಬಂದ ನಿಯಮ. ಇಂದಿಗೂ ಅದು ಮಾನ್ಯ. ಅರ್ಥ ಮಾಡಿಕೊಳ್ಳುವವರಿಗೆ ನಿಷೇಕ ಪ್ರಸ್ಥವೆಂಬುದು ಗಂಡ ಹೆಂಡಿರ ಮಿಲನಕ್ಕೆ ಸಿದ್ಧತೆಯಲ್ಲ! ಅದು ತಪೋದೀಕ್ಷಾ ಸಮಯ!! ಆ ಮೂರು ದಿನಗಳೂ ಅವರು ಪಕ್ಕ ಪಕ್ಕದಲ್ಲೇ, ಏಕಾಂತದಲ್ಲಿದ್ದರೂ, ಸುಗಂಧ-ಸುಪುಷ್ಪ-ಸುಫಲಗಳಲ್ಲದೇ ಹಿರಿಯರ ಒಪ್ಪಿಗೆಯಿದ್ದರೂ, ಸಮ ವಯಸ್ಕರ ಕೆಣಕುವಿಕೆಯ ಪ್ರೋತ್ಸಾಹವಿದ್ದರೂ, ಯುವ ದೇಹಗಳ ತಾಪವಿದ್ದರೂ, ಮನಸ್ಸು ಕುದುರೆಯಂತೆ ಕುಣಿದರೂ, ಲೈಂಗಿಕ ಆಲೋಚನೆ ಅಪ್ಪಿದರೂ, ಪತಿ ಪತ್ನಿಯರು ಕನಿಷ್ಟ ಅಪ್ಪಿ ಮುದ್ದಾಡದೆಯೂ ಇರಬೇಕಾದ ಕತ್ತಿ ಮೇಲಿನ ಸಾಮು ಅದು! ಇಬ್ಬರ ಮಧ್ಯದಲ್ಲಿ ವಿಶೇಷ ಸಸ್ಯ ದಂಡವಿಟ್ಟು ಅದನ್ನು ಅತಿಕ್ರಮಿಸಕೂಡದೆಂದು ಶಾಸ್ತ್ರ. ಅರಿತವರು ಮಾನ್ಯ ಮಾಡಿದರೆ ತಕ್ಕ ಫಲ - ಲೇ )