ಭದ್ರಾಸನದಲ್ಲಿ ಕುಳಿತು ಎಲೆಯನ್ನು ವೀಕ್ಷಿಸಿದ್ದಾರೆ. ಕಣ್ಣಿಗೆ ಹಬ್ಬವಾಗುವಂತೆ ಅನ್ನ, ತವ್ವೆ, ಪಾಯಸ, ಹೋಳಿಗೆ, ಆಂಬೊಡೆ.... ಹೀಗೆ ವಿವಿಧ ಭಕ್ಷ್ಯಗಳು; ಅನೇಕ ಪಲ್ಯೆಗಳು. ಕಣ್ಣು ಅಗಲವಾಗಿ ನಾಲಿಗೆ ನೀರೂರಿದ್ದನ್ನು ವಿಶ್ವಮಿತ್ರರು ಕಂಡರು. " ಓಹ್ ! ಒಮ್ಮೆ ಈ ಇಂದ್ರಿಯಗಳಿಗೆ ಸ್ವಾತಂತ್ರ್ಯ ಸಿಕ್ಕರೆ ಸಾಕು, ನಮ್ಮನ್ನು ಎಳೆದುಬಿಡುತ್ತವೆ, ಅಲ್ಲವೇ? ಇರಲಿ, ಎಷ್ಟೋ ಕಾಲ ನನ್ನಂಕೆಯಲ್ಲಿವೆ. ಈಗೇನೋ ಬಯಸುತ್ತಿವೆ... ನಾನೇನೂ ಇದನ್ನು ಬಯಸಲೂ ಇಲ್ಲ, ಹುಟ್ಟಿಸಲೂ ಇಲ್ಲ. ಇದೂ ಪ್ರಾರಬ್ಧವೇ ಇದ್ದಾತು. ಇರಲಿ, ಇದನ್ನು ಸ್ವೀಕರಿಸಿ ಹೇಗೆ ನಲಿಯುತ್ತವೆ ನೋಡೋಣ.