ತಾನೇನು ಮಾಡಬೇಕು, ಏನು ಮಾತನಾಡಬೇಕು ಎಂದು ತೋಚದೇ ಕೈ ಮುಗಿದು ನಿಂತಿದ್ದ ವಿಶ್ವಮಿತ್ರರಿಗೆ, ಬ್ರಹ್ಮ ತನ್ನ ವರದ ಕೊನೆಯೆಂಬಂತೆ ವಿಶ್ವಮಿತ್ರರ ಬಯಕೆಗೆ ಒಲಿದ ಮುಕ್ತಾಫಲವನ್ನಿತ್ತ; " ಬ್ರಹ್ಮರ್ಷಿ ವಿಶ್ವಮಿತ್ರ! ನಿನಗೆ ಸ್ವಾಗತ. ನಿನ್ನ ಕಠಿಣ, ದೀರ್ಘ, ಅಸ್ಖಲಿತ ತಪಶ್ಚರ್ಯೆಗೆ ನಾನು ಮೆಚ್ಚಿದ್ದೇನೆ. ದೇವತೆಗಳು ಒಡಂಬಟ್ಟಿದ್ದಾರೆ. ಎಷ್ಟೆಂದು ಕೇಳಬೇಡ, ಅತ್ಯಂತ ದೀರ್ಘ ಆಯುಷ್ಶವನ್ನು ನಿನಗೆ ಕೊಟ್ಟಿರುವೆ. ನಿನಗೆ ಶುಭವಾಗಲಿ, ನಿನಗೆ ಮಂಗಳವಾಗಲಿ. ನೀನೆಲ್ಲಿ ಹೋಗಬೇಕೆನ್ನುವೆಯೋ, ಎಲ್ಲಿ ನೆಲೆಸಬೇಕೆನ್ನುವೆಯೋ, ಅದು ನಿನಗೆ ಈಡೇರಲಿ. ಶುಭಂ ಅಸ್ತು"