ಎಂಬ ಅಸಹಜ ಸ್ಥಿತಿಯನ್ನೂ ಊಹಿಸಿಕೊಂಡಾಕೆ! ಹೀಗಾಗಿಯೇ ರಾಮ-ಭರತರಲ್ಲಿ ಆಕೆಗೆ ಭೇದವೇ ಇಲ್ಲ!! ಆದರೆ ತಾನು ಎನ್ನುವುದರಲ್ಲಿ ಸಿಂಹಪಾಲು ಸಂತಾನದ್ದೇ! ಎಲ್ಲಿವರೆಗೆ ತನಗಾಗಲೀ ಭರತನಿಗಾಗಲೀ ತೊಂದರೆ ಇಲ್ಲವೋ, ಅಲ್ಲಿವರೆಗೆ ಅವಳು ಒಳ್ಳೆಯವಳೇ! ಆದರೆ ಮಂಥರೆ ಬಿಡಿಸಿದ ಚಿತ್ರ ಅವಳನ್ನು ಅಲುಗಾಡಿಸಿಬಿಟ್ಟಿತು!! ಇದರಲ್ಲಿ ಮಂಥರೆಯ ತಪ್ಪು ನನಗೆ ಅಷ್ಟೇನೂ ಕಾಣುತ್ತಿಲ್ಲ. ಎಷ್ಟೇ ಆಗಲಿ ಆಕೆಯ ಮಟ್ಟವೇ ಅದು. ತಾನು, ತನ್ನ ಒಡತಿ, ಒಡತಿಯ ಮಗ, ಈ ಮೂವರೇ ಅವಳ ಪ್ರಪಂಚ. ಅವಳು ಭರತನ ವಕೀಲಿ ವಹಿಸಿದ್ದು ಏನೂ ದೊಡ್ಡ ವಿಷಯವಲ್ಲ! ಆದರೆ ಕೈಕೆ ಎಷ್ಟೇ ಆಗಲಿ ರಾಜ ಪುತ್ರಿ, ಈಗ ರಾಜಪತ್ನಿ. ಮಗನ ತಾಯಿ. ಅದರಲ್ಲಿಯೂ ಶ್ರೀರಾಮರನ್ನು ಅತಿ ಹತ್ತಿರದಿಂದ ಬಲ್ಲಾಕೆ! ಆತನ ಗುಣಗಳ ಬಗ್ಗೆ ತಾನೇ ಹೊಗಳಿದಾಕೆ!! ಅಷ್ಟು ಬೇಗ ಮಂಥರೆಯ (ಬಹುಶಃ ಹತ್ತು ನಿಮಿಷಗಳ) ಬೋಧನೆಗೆ ರಾಮ, ಶತ್ರುವಾಗಿ ಕಾಣಬೇಕೆ? ಇನ್ನೆಷ್ಟು ದುರ್ಬಲಳಿದ್ದಾಳು ಆಕೆ! ಭರತನನ್ನು ರಾಜನನ್ನಾಗಿಸುವ ನಡೆಯನ್ನಾದರೂ ಕ್ಷಮಿಸಬಹುದು; ಆದರೆ ರಾಮರಿಗೆ ವಿಧಿಸಿದ ಶಿಕ್ಷೆ, ಆಕೆ ನರಕದ ರಹದಾರಿಗೆ ಕೋರಿಕೊಂಡ ವರ!!!! -ಲೇಖಕರು)