ಕೊನೆ ಮಾತು: ನಮ್ಮಲ್ಲಿ ಎಲ್ಲಿಯವರೆಗೆ ರಾಜಕೀಯ ಪ್ರೇರಿತ ನೇಮಕಗಳು ಆಗುತ್ತಿರುತ್ತವೆಯೋ ಅಲ್ಲಿಯವರೆಗೆ ಇಂತಹ ಘಟನೆಗಳು ಮರುಕಳಿಸುತ್ತವೆ. ಭಾರತ ಬದಲಾಗಬೇಕಾದರೆ ಆಯಕಟ್ಟಿನ ಜಾಗಗಳಿಗೆ ಧರ್ಮ, ಜಾತಿ, ರಾಜಕೀಯ ಲಾಭಗಳ ಮರೆತು ನೇಮಕಗಳು ಆಗಬೇಕು. ರಾಜ್ಯದ ಮುಖ್ಯಮಂತ್ರಿ ಬದಲಾದ ಮರುಕ್ಷಣ ಬದಲಾಗುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿ ವರ್ಗ, ಕಣ್ಣಿಗೆ ರಾಚುವ ರಾಜಕೀಯ ದೊಂಬರಾಟದ ನಡುವೆ ಇದೆಲ್ಲಾ ಬಯಸುವುದು ಹೆಚ್ಚಾಯಿತೇನೋ ಅನ್ನಿಸುತ್ತದೆ. ಆದರೆ ಇದಾಗದ ಹೊರತು ಭಾರತ ' ಮುಂದುವರಿಯುತ್ತಿರುವ ದೇಶ 'ಅಥವಾ' ಎಮರ್ಜಿಂಗ್ ಮಾರ್ಕೆಟ್' ಎನ್ನುವ ಹಣೆಪಟ್ಟಿಯಿಂದ ಹೊರಬಂದು 'ಫಸ್ಟ್ ವರ್ಲ್ಡ್ 'ಅಥವಾ 'ಮುಂದುವರಿದ ದೇಶ' ಎನ್ನಿಸಿಕೊಳ್ಳುವುದು ಕಷ್ಟವೇ ಸರಿ.