ಷೇರು ಮಾರುಕಟ್ಟೆ ಇರಬಹುದು ಅಥವಾ ಕ್ರಿಕೆಟ್ ಅಥವಾ ನೀವು ಇತರೆ ಯಾವುದೇ ವೃತ್ತಿಯಲ್ಲಿ ಬಹಳಷ್ಟು ಚೆನ್ನಾಗಿ ಪಲಿತಾಂಶವನ್ನ ಪಡೆಯುತ್ತಿದ್ದರೆ ಆಗ ಸಹಜವಾಗೇ ಒಂದಷ್ಟು ಅಸಡ್ಡೆ ಆವರಿಸುತ್ತದೆ.
ಎಲ್ಲವು ಅಂದುಕೊಂಡಂತೆ ಆಗುತ್ತಿದ್ದರೆ, ಅಥವಾ ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಆಗುವಾಗ ಇಂತಹ ಮನೋಭಾವ ಉಂಟಾಗುವುದು ಸಾಮಾನ್ಯ. ಇವತ್ತಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ನಾನಿಷ್ಟು ಹಣ ಮಾಡಿದೆ ಎನ್ನುವ ಧನಾತ್ಮಕ ಕಥೆಗಳ ಮಹಾಪೂರವೇ ಹರಿದು ಬರುತ್ತಿದೆ. ನಿಮಗೆಲ್ಲಾ ನೆನಪಿರಲಿ ಕಳೆದುಕೊಂಡ ಹಣದ ಬಗ್ಗೆ ಚಕಾರ ಎತ್ತದ ಜನರೆಲ್ಲಾ ಇಂದು ಸ್ವಲ್ಪ ಲಾಭ ಮಾಡಿದರೂ ಸಾಕು ಅದಕ್ಕೆ ಸುಣ್ಣ ಬಣ್ಣವನ್ನ ಕಟ್ಟಿ ಹೇಳುತ್ತಾರೆ. ಇದಕ್ಕೆ ಪೂರಕವಾಗಿ ನಿಮಗೆ ಇನ್ನೊಂದು ಉದಾಹರೆಣೆ ಹೇಳುತ್ತೇನೆ, ನೂರು ಚಲನ ಚಿತ್ರದಲ್ಲಿ ಗೆಲ್ಲುವುದು ಮೂರು ಅಥವಾ ನಾಲ್ಕು ಮಾತ್ರ! ಆದರೂ 96 ಸೋಲುಗಳನ್ನ ಅದು ಮುಚ್ಚಿ ಹಾಕುತ್ತದೆ. ಮತ್ತೆ ಮತ್ತೆ ಹೊಸ ಹೂಡಿಕೆದಾರರನ್ನ ತನ್ನೆಡೆ ಸೆಳೆಯುತ್ತದೆ. ಷೇರು ಮಾರುಕಟ್ಟೆ ಕಥೆ ಕೂಡ ಸೇಮ್!
ಮೇಲಿನ ಸಾಲುಗಳಲ್ಲಿ ಋಣಾತ್ಮಕ ಧ್ವನಿ ಕೇಳಿ ಬಂದಿದ್ದರೆ ಕ್ಷಮೆ ಇರಲಿ. ಬರಹದ ಉದ್ದೇಶ ಷೇರು ಮಾರುಕಟ್ಟೆಯನ್ನ ಕೆಟ್ಟದಾಗಿ ಬಿಂಬಿಸುವುದಲ್ಲ. ಬದಲಿಗೆ ಅಕ್ಕಪಕ್ಕದವರು, ನಿಮ್ಮ ಗೆಳೆಯರು ಅಥವಾ ಇನ್ನ್ಯಾರೋ ಹೇಳಿದರು, ಲಾಭ ಮಾಡಿದರು ನಾನು ಮಾಡಬಹುದು ಎನ್ನುವ ಉದ್ದೇಶದಿಂದ ಷೇರು ಮಾರುಕಟ್ಟೆ ಪ್ರವೇಶಿಸಿ ಬೇಡಿ ಎನ್ನುವುದನ್ನ ತಿಳಿಸುವುದು. ಜೊತೆಗೆ ನೀವೀಗಾಗಲೇ ಮಾರುಕಟ್ಟೆಯಲ್ಲಿದ್ದರೆ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಮಾಡುವ ತಪ್ಪುಗಳು ಯಾವುವು ಎನ್ನುವುದನ್ನ ತಿಳಿಸುವುದು ಮತ್ತು ಅಂತಹ ಸಾಮಾನ್ಯ ತಪ್ಪುಗಳನ್ನ ಮಾಡದಿದ್ದರೆ ಇಂದಿನ ಬುಲ್ ಮಾರುಕಟ್ಟೆಯಲ್ಲಿ ಉಳಿದುಕೊಳ್ಳಬಹುದು ಎನ್ನುವುದನ್ನ ತಿಳಿಸುವುದಾಗಿದೆ.
ಷೇರು ಮಾರುಕಟ್ಟೆ ಕುಸಿತವಾದಾಗ ಎಲ್ಲರೂ ಒಂದಷ್ಟು ಎಚ್ಚರಿಕೆಯಿಂದ ನಡೆಯುತ್ತಾರೆ. ಅದೇ ಷೇರು ಮಾರುಕಟ್ಟೆ ಗೂಳಿ ಓಟದಲ್ಲಿದ್ದಾಗ ಎಲ್ಲರಲ್ಲೂ ಒಂದು ರೀತಿಯ ಕೇರ್ ಲೆಸ್ನೆಸ್ ಮನೆ ಮಾಡಿ ಬಿಡುತ್ತದೆ. ಆಗ ಸಹಜವಾಗಿ ಆಗುವ ತಪ್ಪುಗಳ ಪಟ್ಟಿಯನ್ನ ಮಾಡೋಣ. ಮತ್ತು ಈ ತಪ್ಪುಗಳನ್ನ ನಾವು ಮಾಡದಂತೆ ಎಚ್ಚರಿಕೆ ವಹಿಸೋಣ.
ಕೊನೆ ಮಾತು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡದೆ ಇರುವುದು, ಅಥವಾ ಕೆಲವೇ ಕೆಲವು ವಲಯದಲ್ಲಿ ಹೂಡಿಕೆ ಮಾಡುವುದು, ಪೂರ್ಣವಾಗಿ ಲಾಭವನ್ನ ಪಡೆದು ನಿರ್ಗಮಿಸುವುದು ಹೀಗೆ ಯಾವುದೇ ನಿರ್ಧಾರಗಳು ಏಕಮುಖವಾಗಿದ್ದರೆ ಅವುಗಳನ್ನ ತಪ್ಪು ಅಥವಾ ಬುದ್ದಿವಂತ ನಡೆ ಎನ್ನಲಾಗುವುದಿಲ್ಲ. ಇಲ್ಲೇನಿದ್ದರೂ ಮಿಡ್ ಪಾತ್ , ಮಧ್ಯಮಾರ್ಗ ಮಾತ್ರ ಒಂದಷ್ಟು ಯಶಸ್ಸನ್ನ ತಂದುಕೊಡುತ್ತದೆ. ಸೋಲು ಭಯ, ಅಸ್ಥಿರತೆ, ಅಪನಂಬಿಕೆ, ಹುಟ್ಟುಹಾಕುತ್ತದೆ. ಆಗೆಲ್ಲ ಮನುಷ್ಯ ಬಹಳಷ್ಟು ಜಾಗ್ರತೆಯನ್ನ ವಹಿಸುತ್ತಾನೆ. ಮತ್ತೆ ಕಷ್ಟದಿಂದ ಮರಳಿ ದಾರಿಗೆ ಬರುತ್ತಾನೆ. ಆದರೆ ಯಶಸ್ಸು ಅಥವಾ ಗೆಲುವು ಮನುಷ್ಯನಲ್ಲಿ ಅತಿ ವಿಶ್ವಾಸ, ಜಗತ್ತನ್ನ ಗೆಲ್ಲ ಬಲ್ಲೆ ಎನ್ನುವ ಹುಮ್ಮಸ್ಸು ಸೃಷ್ಟಿಸುತ್ತದೆ. ಇದು ಒಳ್ಳೆಯದು, ಆದರೆ ಹುಮ್ಮಸ್ಸಿನಲ್ಲಿ ತಪ್ಪುಗಳಾಗದಿರಲಿ, ಹುಮ್ಮಸ್ಸನ್ನ ಸರಿಯಾಗಿ ಬಳಸಿಕೊಂಡು ಅಭಿವೃದ್ಧಿಯ ಹಾದಿಯಲ್ಲಿ ಸಾಗೋಣ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement