ಜನರಿಗೆ ವಂಚನೆ ಮಾಡಿ ಹಣವನ್ನ ಗಳಿಸುವುದು ಇವತ್ತಿನ ಕೆಲಸವಲ್ಲ. ಇದಕ್ಕೂ ಬಹಳ ದೊಡ್ಡ ಇತಿಹಾಸವಿದೆ. ಜನರು ಈ ರೀತಿ ಮೋಸ ಹೋಗಲು ಬಹು ಮುಖ್ಯ ಕಾರಣ ಹೆಚ್ಚಿನ ಹಣವನ್ನ ಗಳಿಸುವ ಆಸೆ.
ಹೆಚ್ಚು ಕಷ್ಟವಿಲ್ಲದೆ ಹಣವನ್ನ ದ್ವಿಗುಣ ಮಾಡಿಕೊಳ್ಳುವ ಜನರ ಮಾನಸಿಕತೆ ಮೋಸ ಮಾಡುವ ಜನರಿಗೆ ಬಂಡವಾಳ. ಇದನ್ನ ಚೆನ್ನಾಗಿ ತಿಳಿದುಕೊಂಡು ಕೈಲಾದ ಮಟ್ಟಿಗೆ ವಂಚನೆಯಲ್ಲಿ ತೊಡಗಿಕೊಂಡವರ ಸಂಖ್ಯೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ.
ಹಿಂದೆ ಮೋಸ ಮಾಡಲು ದೈಹಿಕವಾಗಿ ಇರಬೇಕಾಗಿತ್ತು. ಆದರೆ ಇಂದು ಅದರ ಅವಶ್ಯಕತೆಯೂ ಇಲ್ಲ. ಸಾವಿರಾರು ಮೈಲಿ ದೂರದಲ್ಲಿ ಕುಳಿತು ನಮ್ಮ ಖಾತೆಯನ್ನ ಗುಡಿಸಿ ಹೋಗಿ ಬಿಡುತ್ತಾರೆ. ಇಂತಹ ವಂಚನೆಯ ಪ್ರಕರಣಗಳ ಬಗ್ಗೆ ಹಿಂದೆ ಆಗೊಮ್ಮೆ, ಈಗೊಮ್ಮೆ ಮಾತುಕತೆಯಾಗುತ್ತಿತ್ತು. ಆದರೆ ಯಾವಾಗ ಆನ್ಲೈನ್ ಮೂಲಕ ವಂಚನೆ ಶುರುವಾಯಿತು ಆಗ ಇದರ ಬಗ್ಗೆ ಮಾತನಾಡುವುದು ಹೆಚ್ಚಾಯಿತು. ಏಕೆಂದರೆ ಹಿಂದೆ ಇಂತಹ ವಂಚನೆಯನ್ನ ಮಾಡಲು ಶ್ರಮ ವಹಿಸಬೇಕಿತ್ತು, ಹೀಗಾಗಿ ವಂಚನೆಯ ಪ್ರಕರಣಗಳು ಕಡಿಮೆಯಿದ್ದವು. ಅಲ್ಲದೆ ಸಿಕ್ಕಿ ಬಿದ್ದರೆ ಜನರು ಕೊಡುವ ಧರ್ಮದೇಟಿನ ಭಯ ಕೂಡ ಇರುತ್ತಿತ್ತು. ಇಂದು ಎಲ್ಲವೂ ಬೆರಳ ತುದಿಯಲ್ಲಿ ನಡೆದು ಹೋಗುತ್ತಿದೆ. ಹೀಗಾಗಿ ವಂಚನೆಯ ಪ್ರಕರಣಗಳು ಕೂಡ ಬಹಳ ಹೆಚ್ಚಾಗಿದೆ. ಇಂತಹ ವಂಚನೆಯ ಪ್ರಕರಣಗಳಲ್ಲಿ ಜನ ಸಾಮಾನ್ಯರು ಮಾತ್ರವಲ್ಲ ಪೊಲೀಸ್ ಅಧಿಕಾರಿಗಳು, ಸಮಾಜದ ಗಣ್ಯರು ಕೂಡ ತೊಂದರೆಗೆ ಸಿಲುಕಿದ್ದಾರೆ. ಜನರನ್ನ ವಂಚಿಸಿ ಹಣವನ್ನ ಲೂಟಿ ಮಾಡುವುದರಲ್ಲಿ ಬಹಳಷ್ಟು ವಿಧಾನಗಳಿವೆ, ಆನ್ಲೈನ್ ವಂಚನೆ ಅದರಲ್ಲಿ ಒಂದು. ಸಮಾಜದಲ್ಲಿ ಯಾವ ರೀತಿಯಲ್ಲಿ ಜನ ವಂಚಿಸಲು ಸಿದ್ಧರಿರುತ್ತಾರೆ ಎನ್ನುವುದನ್ನ ಒಂದಷ್ಟು ತಿಳಿದುಕೊಳ್ಳೋಣ.
ಆನ್ಲೈನ್ ವಂಚನೆಗಳು: ಮೇಲೆ ಹೇಳಿದ ಪ್ರಕಾರಗಳು ಹೆಳೆಯದಾದವು. ಇಂದಿನ ದಿನದಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವುದು ಈ ಆನ್ಲೈನ್ ವಂಚನೆಗಳು. ಇದರಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಪ್ರಮುಖವಾಗಿ
ಕೊನೆ ಮಾತು : ಮೇಲಿನ ಎಲ್ಲಾ ವಂಚನೆಯ ಪ್ರಕಾರಗಳನ್ನ ಗಮನಿಸಿ ನೋಡಿ, ಅಲ್ಲಿ ಪ್ರಮುಖವಾಗಿ ಕಾಣುವುದು ಒಂದು ವರ್ಗದ ಜನರಲ್ಲಿ ಹೆಚ್ಚು ಕಷ್ಟ ಪಡೆದ ಹಣವನ್ನ ವೃದ್ಧಿ ಮಾಡಿಕೊಳ್ಳುವ ಆಸೆ ಇರುವುದು ಕಾಣಿಸುತ್ತದೆ. ಕೆಲವೆಡೆ ಕಡಿಮೆ ಹಣಕ್ಕೆ ಹೆಚ್ಚಿನ ಬೆಲೆಯ ಪದಾರ್ಥ ಸಿಗುತ್ತದೆ ಎನ್ನುವ ಆಸೆ. ಒಟ್ಟಿನಲ್ಲಿ ಕಡಿಮೆ ಹಣಕ್ಕೆ ಹೆಚ್ಚು ಮೌಲ್ಯ ಸಿಗುತ್ತದೆ ಎನ್ನುವ ಆಸೆ ಈ ಎಲ್ಲಾ ವಂಚನೆಗೆ ಮೂಲ ಕಾರಣ. ಹೆಚ್ಚಿನ ಬಡ್ಡಿಯ ಆಸೆ, ಬೇಗ ಹಣ ದುಪ್ಪಟ್ಟು ಮಾಡಿಕೊಳ್ಳುವ ಆಸೆಗಳ ನಡುವೆ ಒಂದು ಸಣ್ಣ ವಿವೇಚನೆ ಮನುಷ್ಯ ಮರೆತು ಬಿಡುತ್ತಾನೆ. ಯಾರೇಕೆ ಇವರಿಗೆ ಹಣವನ್ನ ವೃದ್ಧಿಸಿ ಕೊಡುತ್ತಾರೆ? ಹಾಗೊಮ್ಮೆ ಅವರು ಹೇಳುವ ಪ್ರಕಾರ ಅಷ್ಟು ದೊಡ್ಡ ಮಟ್ಟದಲ್ಲಿ ದುಪ್ಪಟ್ಟು ಮಾಡಿಕೊಳ್ಳುವ ತಾಕತ್ತು ಅವರಿಗಿದ್ದರೆ ಅವರೇ ಅದನ್ನ ಮಾಡಿಕೊಳ್ಳಬಹುದಲ್ಲವೇ? ಅವರೇಕೆ ನಿಮಗೆ ಉಪಕಾರ ಮಾಡಲು ಬರುತ್ತಾರೆ? ಇಂತಹ ಸಾಮಾನ್ಯ ಪ್ರಶ್ನೆಗಳನ್ನ ಕೇಳಿಕೊಳ್ಳುವ ವಿವೇಚನೆಯನ್ನ ಮನುಷ್ಯ ಕಳೆದುಕೊಳ್ಳುತ್ತಾನೆ. ಆಗ ಇಂತಹ ವಂಚನೆಗಳು ಘಟಿಸುತ್ತವೆ.
ಎಲ್ಲಿಯವರೆಗೆ ನಾವು ಜಾಗೃತರಾಗುವುದಿಲ್ಲ, ಹಣಕಾಸು ಸಾಕ್ಷರತರಾಗುವುದಿಲ್ಲ, ಪ್ರಲೋಭನೆಗೆ ಒಳಗಾಗುವುದು ನಿಲ್ಲಿಸುವುದಿಲ್ಲ ಅಲ್ಲಿಯವರೆಗೆ ಇಂತಹ ವಂಚನೆಗಳು ತಪ್ಪುವುದಿಲ್ಲ. ತೀರಾ ಇತ್ತೀಚಿನ ಆನ್ಲೈನ್ ವಂಚನೆ ಪ್ರಕರಣಗಳು ಮಾತ್ರ ಇದಕ್ಕೆ ಅಪವಾದ. ಗ್ರಾಹಕ ತನ್ನದೇನೂ ತಪ್ಪಿಲ್ಲದೆಯೂ ಮೋಸಕ್ಕೆ ತುತ್ತಾಗಿದ್ದಾನೆ. ಇಂತಹ ಕೆಲವೇ ಕೆಲವು ಪ್ರಕರಣ ಹೊರತುಪಡಿಸಿ ಮಿಕ್ಕದು ಘಟಿಸುವುದು ಮಾತ್ರ ಲಾಲಸೆಯಿಂದ , ಹೀಗಾಗಿ ಸ್ವ ನಿಯಂತ್ರಣ ಬಹಳ ಮುಖ್ಯ. ಕೇವಲ ವ್ಯವಸ್ಥೆಯ ದೋಷಿಸಿ ಪ್ರಯೋಜನವಿಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement