
ಈ ವಿಶಾಲವಾದ ಜಗತ್ತಿನಲ್ಲಿ ಇಂದಿಗೆ ನಾವು ಹತ್ತಿರತ್ತಿರ 800 ಕೋಟಿ ಜನರ ಕುಟುಂಬವಾಗಿದ್ದೇವೆ. ಅನ್ಯ ಗ್ರಹಗಳಲ್ಲಿ ಬೇರೆ ಜೀವಿಗಳಿವೆಯೇ ಎನ್ನುವ ಉತ್ಸಾಹ ಅದಕ್ಕಾಗಿ ಹುಡುಕಾಟ ನಡೆಸುತ್ತಿರುವ ಕಾಲಘಟ್ಟದಲ್ಲಿ ನಮ್ಮ ಮನೆಯಲ್ಲಿನ 800 ಕೋಟಿ ಜನರ ಜೀವನದಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ.
ಕೋಟ್ಯಂತರ ಜನರಿಗೆ ಮೂಲಭೂತ ಸೌಲಭಗಳಿಲ್ಲ. ಇನ್ನೂ ನೀರು, ಕರೆಂಟು ಇಲ್ಲದ ಹಳ್ಳಿಗಳು ಭೂಮಿಯ ಮೇಲೆ ಅಸಂಖ್ಯ. ಹೀಗೆ ಮೂಲಭೂತ ಸೌಲಭ್ಯವೇ ಇಲ್ಲದ ಜನರಿರುವಾಗ, ಕೆಲಸವಿಲ್ಲದೆ ಇರುವ ಜನರ ಸಂಖ್ಯೆ ಎಷ್ಟಿರಬಹುದು? ಗಮನಿಸಿ ನೋಡಿ, ಜಗತ್ತಿನ ಯಾವುದೇ ದೇಶದ ಸರಕಾರಗಳು ಎಷ್ಟು ಕೆಲಸವನ್ನು ಸೃಷ್ಟಿಸಲು ಸಾಧ್ಯ? ಸರಕಾರಿ ಕೆಲಸ ಬದಿಗಿಟ್ಟರೂ, ದೊಡ್ಡ ಕಾರ್ಪೊರೇಟ್ ಹೌಸ್ಗಳು ಕೂಡ ಅದೆಷ್ಟು ಜನರಿಗೆ ಕೆಲಸ ಕೊಡಲು ಸಾಧ್ಯ? ಹೀಗಾಗಿ ಜನ ತಮ್ಮ ಬದುಕನ್ನು ಕಂಡುಕೊಳ್ಳಲು ಸಣ್ಣ ಪುಟ್ಟ ಉದ್ಯಮಕ್ಕೆ ಕೈ ಹಾಕದೆ ಬೇರೆ ದಾರಿಯಿಲ್ಲ! ತಮ್ಮ ಕೆಲಸ, ಸಮಾಜದಲ್ಲಿ ತಮ್ಮ ಜಾಗವನ್ನು ಅವರೇ ಸೃಷ್ಟಿಸಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಾಗಿದೆ. ಹೀಗಾಗಿ ಭಾರತ ಮಾತ್ರವಲ್ಲ, ಜಗತ್ತಿನ ಎಲ್ಲಾ ದೇಶಗಳಲ್ಲೂ ಇಂತಹ ಸಣ್ಣ ಪುಟ್ಟ ವ್ಯಾಪಾರ ಮಾಡುವ ಜನರನ್ನು ಕಾಣಬಹುದು.
ನಿಜವಾಗಿ ಹೇಳಬೇಕೆಂದರೆ ಇವರು ಆಯಾ ದೇಶದ ಆರ್ಥಿಕತೆಯ ಬೆನ್ನೆಲುಬು. ಇಂದಿನ ಸಮಾಜದಲ್ಲಿ ರೈತ, ಯೋಧರಿಗೆ ಅದೆಷ್ಟು ಗೌರವವಿದೆ, ಅಷ್ಟೇ ಗೌರವ ಅಥವಾ ಅದಕ್ಕಿಂತ ಒಂದಂಶ ಹೆಚ್ಚು ಗೌರವ ಇವರಿಗೂ ಸಿಗಬೇಕು. ಆದರೆ ಅದು ಸಿಗುತ್ತಿಲ್ಲ. ಜಗತ್ತಿನಲ್ಲಿರುವ ನೂರಾರು ಅನಿಶ್ಚಿತತೆಗಳನ್ನು ಎದುರಿಸಿ ಇವರು ತಮಗೆ ಕೆಲಸ ಸೃಷ್ಟಿಸಿಕೊಳ್ಳುವುದರ ಜೊತೆಗೆ, ನಾಲ್ಕಾರು ಮಂದಿಗೆ ಉದ್ಯೋಗ ಕೂಡ ಸೃಷ್ಟಿಸುತ್ತಾರೆ. ಇಂದಿನ ಲೇಖನದಲ್ಲಿ ಇಂತಹ ಸ್ವ-ಉದ್ಯೋಗ, ವ್ಯಾಪಾರ ಶುರು ಮಾಡುವಾಗ ಮಾಡುವ ಸಾಮಾನ್ಯ ತಪ್ಪುಗಳನ್ನು ತಿಳಿದುಕೊಳ್ಳೋಣ. ಅವುಗಳನ್ನು ಮಾಡದಿರಲು ಪ್ರಯತ್ನಿಸಿದರೆ ಅಲ್ಲಿಗೆ ವ್ಯಾಪಾರದಲ್ಲಿ ಅರ್ಧ ಗೆದ್ದಂತೆ.
ಕೊನೆಮಾತು: ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಎಲ್ಲಾ ನಾಗರೀಕರಿಗೂ ಒಂದು ಕೆಲಸ ಒದಗಿಸುವುದು ಸಾಧ್ಯವಿಲ್ಲದ ಮಾತು. ನಮ್ಮ ದೇಶದ ಜಿಡಿಪಿಯ 40 ಪ್ರತಿಶತ ಇಂತಹ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಂದ ಬರುತ್ತಿದೆ ಎಂದರೆ ಈ ಉದ್ದಿಮೆಗಳ ಮಹತ್ವ ಗೊತ್ತಾಗುತ್ತದೆ. ಈ ವಲಯದ ಉದ್ದಿಮೆದಾರರಿಗೆ ಕೊಡಬೇಕಾದ ಗೌರವ ಸಮಾಜ ಕೊಡುತ್ತಿಲ್ಲ ಎನ್ನುವುದು ನಿಜಕ್ಕೂ ಖೇದಕರ. ಸರಕಾರ ಕೂಡ ಇವುಗಳ ಅಭಿವೃದ್ಧಿಗೆ ನೀಡುತ್ತಿರುವ ಸವಲತ್ತು, ಗಮನ ಕೂಡ ಸಾಲದು. ಈ ವಲಯದ ಜನರಿಗೆ ಸಮಾಜವಾಗಿ ನಾವು ಧೈರ್ಯ ಮತ್ತು ಬೆಂಬಲ ನೀಡಬೇಕು. ಸರಕಾರ ಇನ್ನಷ್ಟು ಸರಳ ಮತ್ತು ಸುಸ್ಥಿರ ನಿಯಮಗಳನ್ನು ತರಬೇಕು. ತೆರಿಗೆಯಲ್ಲಿ ಒಂದಷ್ಟು ವಿನಾಯ್ತಿ ಕೂಡ ನೀಡಬೇಕು. ಈ ವಲಯ ಬೆಳೆದಷ್ಟು ದೇಶದ ಆರ್ಥಿಕತೆಯೂ ಗಟ್ಟಿಯಾಗುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement