ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಗುರ್ಮೆಹರ್ ಸಂದೇಶಕ್ಕೆ ಪ್ರತಿಯಾಗಿ, ಎರಡು ಬಾರಿ ತ್ರಿಶತಕ ಬಾರಿಸಿದ್ದು ನಾನಲ್ಲ, ನನ್ನ ಬ್ಯಾಟ್ ಎಂದು ಅಣಕಿಸುವ ಸಂದೇಶ ಟ್ವೀಟರ್ ಮೂಲಕ ಹರಿಬಿಟ್ಟಿದ್ದರು. ಇದರ ಬೆನ್ನಲ್ಲೇ ಬಲಿಂಪಿಕ್ ಪದಕ ವಿಜೇತ ಯೋಗೇಶ್ವರ ದತ್ ಅಡಾಲ್ಫ್ ಹಿಟ್ಲರ್, ಒಸಾಮ ಬಿನ್ ಲಾಡೆನ್ ಮತ್ತು ಕೃಷ್ಣ ಮೃಗದ ಚಿತ್ರವನ್ನು ಟ್ವೀಟ್ ಮಾಡಿ ಕೌರ್ ಟ್ವೀಟ್ ಬಗ್ಗೆ ಅಣಕವಾಡಿದ್ದರು.