ಪಾಕಿಸ್ತಾನದ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಸೋತ ನಂತರ ಅನಿಲ್ ಕುಂಬ್ಳೆ ಬೌಲರ್ ಗಳನ್ನು ಪ್ರಶ್ನಿಸಿದ್ದರು, ಒಬ್ಬೊಬ್ಬರನ್ನೇ ಕರೆದು ಕುಂಬ್ಳೆ ಮಾತನಾಡಿದ್ದರು. ಈ ವೇಳೆ ತಮಗೆ ಕಿರಿಕಿರಿ ಉಂಟಾಗಿದೆ ಎಂದು ತಂಡದ ಅನೇಕ ಆಟಗಾರರು ಕೋಹ್ಲಿಗೆ ದೂರು ನೀಡಿದ್ದಾರೆ. ಇದಕ್ಕೂ ಮುನ್ನ ಕುಂಬ್ಳೆ ಹಾಗೂ ಕೋಹ್ಲಿ ನಡುವೆ ಭಿನ್ನಾಭಿಪ್ರಾಯವಿತ್ತು ಎಂದು ಹೇಳಲಾಗುತ್ತಿದ್ದು, ಭಿನ್ನಾಭಿಪ್ರಾಯ ಹಾಗೂ ದೂರಿನಿಂದ ಬೇಸರಗೊಂಡಿರುವ ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.