ವಿದೇಶಿ ಆಟಗಾರರ ವಿರುದ್ದ ವೀರೇಂದ್ರ ಸೆಹ್ವಾಗ್ ವಾಗ್ದಾಳಿ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪ್ಲೇ-ಆಫ್ ಹಂತಕ್ಕೇರುವ ಅವಕಾಶ ವಂಚಿತರಾದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿದೇಶಿ ಆಟಗಾರರ ವಿರುದ್ಧ ವೀರೇಂದ್ರ...
ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್
Updated on
ಮೊಹಾಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪ್ಲೇ-ಆಫ್ ಹಂತಕ್ಕೇರುವ ಅವಕಾಶ ವಂಚಿತರಾದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿದೇಶಿ ಆಟಗಾರರ ವಿರುದ್ಧ ವೀರೇಂದ್ರ ಸೆಹ್ವಾಗ್ ಕಿಡಿಕಾರಿದ್ದಾರೆ. 
ಪುಣೆ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಸೋಲು ಕಾಣುವ ಮೂಲಕ ಪ್ಲೇ-ಆಫ್ ಕನಸು ನುಚ್ಚುನೂರಾಯಿತು. ಇದರಿಂದ ಬೇರಸಗೊಂಡ ಪಂಜಾಬ್ ತಂಡದ ನಿರ್ದೇಶಕ ವೀರೇಂದ್ರ ಸೆಹ್ವಾಗ್ ಹಾಶಿಂ ಆಮ್ಲಾ ಹೊರತು ಪಡಿಸಿ ಉಳಿದೆಲ್ಲಾ ವಿದೇಶಿ ಆಟಗಾರರು ವಿಫಲರಾಗಿದ್ದಾರೆ. ನಾಯಕ ಗ್ಲೆನ್ ಮ್ಯಾಕ್ಸ್ ವೆಲ್ 9 ಪಂದ್ಯಗಳಲ್ಲಿ ವಿಫಲರಾದರು. ಅತ್ಯಂತ ಅನುಭವಿ ಆಟಗಾರರಾದ ಅವರು ನಾಯಕನಾಗಿ ಜವಬ್ದಾರಿ ಹೊತ್ತುಕೊಂಡು ಆಡಬೇಕಿತ್ತು ಎಂದು ಕಿಡಿಕಾರಿದ್ದಾರೆ. 
ಇನ್ನು ತಂಡದಲ್ಲಿ ಸ್ಫೋಟಕ ಆಟಗಾರ ಶಾನ್ ಮಾರ್ಷ್, ಮಾರ್ಟಿನ್ ಗಪ್ಟಿಲ್ ಸಹ ಇದ್ದು ಅವರು ತಮ್ಮ ಜವಾಬ್ದಾರಿಯುವ ಆಟ ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ. ಈ ಆಟಗಾರರ ಮೇಲೆ ನಮಗೆ ನಿರೀಕ್ಷೆ ಜಾಸ್ತಿ ಇತ್ತು. ಅದನ್ನು ಹುಸಿ ಮಾಡಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com