ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರಾಹುಲ್ ದ್ರಾವಿಡ್, ಇನ್ನೂ ಹಲವು ಸವಾಲುಗಳಿವೆ, ವಿಶ್ವಕಪ್ ಗೆಲ್ಲುವ ಸವಾಲಷ್ಟೇ ಮುಗಿದಿದೆ ಎಂದು ಹೇಳಿದ್ದಾರೆ. ಯುವ ತಂಡಕ್ಕೆ 14-16 ತಿಂಗಳ ಹಿಂದೆಯೇ ತರಬೇತಿ ನೀಡಲು ಪ್ರಾರಂಭಿಸಿದ್ದ ಪ್ರಕ್ರಿಯೆ ನನಗೆ ಸಮಾಧಾನ ತಂದಿದೆ. ಕೇವಲ ವಿಶ್ವಕಪ್ ಅಲ್ಲದೇ ಅಂಡರ್-19 ಆಟಗಾರರನ್ನು ತಯಾರಿ ಮಾಡುವ ಒಟ್ಟಾರೆ ಪ್ರಕ್ರಿಯೆ ನನಗೆ ಸಮಾಧಾನ ತಂದಿದೆ, ನಾವು ಉತ್ತಮವಾದ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದ್ದೇವೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.