ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಲ್ಲ. ಅದೊಂದು ಧರ್ಮ, ನಮ್ಮ ಜನರು ನಮ್ಮ ಜೀವನಕ್ಕಿಂತ ಹೆಚ್ಚು ಈ ಕ್ರೀಡೆಯನ್ನು ಪ್ರೀತಿಸುತ್ತಾರೆ. ಆದರೆ ಅಂಧರ ವಿಶ್ವಕಪ್ ವಿಜೇತ ತಂಡದ ಬಗೆಗೆ ಯಾವ ಮೆಚ್ಚುಗೆಯ ಮಾತುಗಳೂ ಕೇಳಿ ಬರುತ್ತಿಲ್ಲ ಎನ್ನುವುದು ನಿಜಕ್ಕೂ ದುರ್ವಿಧಿಯೇ ಸರಿ. ಈ ತಂಡ ಕಳೆದ ಐವತ್ತೊಂಭತ್ತು ತಿಂಗಳಲ್ಲಿ ಎರಡು ಟಿ 20 ವಿಶ್ವಕಪ್, ಎರಡು ಏಕದಿನ ವಿಶ್ವಕಪ್, ಒಂದು ಏಷ್ಯಾ ಕಪ್ ಮತ್ತು ನಾಲ್ಕು ದ್ವಿಪಕ್ಷೀಯ ಸರಣಿ ಜಯಿಸಿದೆ.