ಮತ್ತೊಂದು ಚೆಂಡು ವಿರೂಪ ಪ್ರಕರಣ: ಶ್ರೀಲಂಕಾ ನಾಯಕ ದಿನೇಶ್ ಚಂದಿಮಾಲ್ ವಿರುದ್ಧ ಆರೋಪ

ಆಸ್ಟ್ರೇಲಿಯಾ ತಂಡದ ಇಬ್ಬರು ಆಟಗಾರರ ವಿರುದ್ಧ ಚೆಂಡು ವಿರೂಪಗೊಳಿಸಿದ್ದ ಆರೋಪ ಕೇಳಿಬಂದಿದ್ದ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಂದಿಮಾಲ್ ವಿರುದ್ಧವೂ ಚೆಂಡು ವಿರೂಪಗೊಳಿಸಿರುವ
ಮತ್ತೊಂದು ಚೆಂಡು ವಿರೂಪ ಪ್ರಕರಣ: ಶ್ರೀಲಂಕಾ ನಾಯಕ ದಿನೇಶ್ ಚಂದಿಮಾಲ್ ವಿರುದ್ಧ ಆರೋಪ
ಮತ್ತೊಂದು ಚೆಂಡು ವಿರೂಪ ಪ್ರಕರಣ: ಶ್ರೀಲಂಕಾ ನಾಯಕ ದಿನೇಶ್ ಚಂದಿಮಾಲ್ ವಿರುದ್ಧ ಆರೋಪ
Updated on
ಆಸ್ಟ್ರೇಲಿಯಾ ತಂಡದ ಇಬ್ಬರು ಆಟಗಾರರ ವಿರುದ್ಧ ಚೆಂಡು ವಿರೂಪಗೊಳಿಸಿದ್ದ ಆರೋಪ ಕೇಳಿಬಂದಿದ್ದ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಂದಿಮಾಲ್ ವಿರುದ್ಧವೂ ಚೆಂಡು ವಿರೂಪಗೊಳಿಸಿರುವ ಆರೋಪ ಕೇಳಿಬಂದಿದೆ. 
ಐಸಿಸಿ ತನ್ನ ಟ್ವೀಟ್ ನಲ್ಲಿ ಈ ಬಗ್ಗೆ ತಿಳಿಸಿದ್ದು, ವೆಸ್ಟ್ ಇಂಡೀಸ್ ಹಾಗೂ ಲಂಕಾ ನಡುವಿನ ಟೆಸ್ಟ್ ನಲ್ಲಿ ಚಂದಿಮಾಲ್ ಚೆಂಡಿನ ಸ್ವರೂಪವನ್ನು ಬದಲಾವಣೆ ಮಾಡಿದ್ದಾರೆ ಎಂದು ಹೇಳಿದೆ. ಐಸಿಸಿಯ ನೀತಿ ಸಂಹಿತೆಯ ಆರ್ಟಿಕಲ್ 2.2.9 ರ ಉಲ್ಲಂಘನೆಯಾಗಿದೆ ಎಂದು ಐಸಿಸಿ ಹೇಳಿದೆ. 
ಪ್ರಂದ್ಯದಲ್ಲಿ ಚೆಂಡು ವಿರೂಪಗೊಂಡಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 3 ನೇ ದಿನದ ಪಂದ್ಯದಲ್ಲಿ 2 ಗಂಟೆ ವಿಳಂಬ ಉಂಟಾಯಿತು. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಗೆ ಹೆಚ್ಚುವರಿಯಾಗಿ 5 ರನ್ ಗಳನ್ನು ನೀಡಲಾಯಿತು. ಚೆಂಡು ವಿರೂಪಗೊಳಿಸಿರುವ ಆರೋಪವನ್ನು ಶ್ರೀಲಂಕಾ ತಿರಸ್ಕಿರಿಸಿದ್ದು, ಈ ಬಗ್ಗೆ ವಿಡಿಯೋ ದೃಷ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com