ಕೋಲ್ಕತ್ತಾ: 2014 ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದಾಗಿನಿಂದಲೂ ವಿಕೆಟ್ ಕೀಪಿಂಗ್ ನಲ್ಲಿ ಆ ಸ್ಥಾನ ತುಂಬಿರುವುದು ವೃದ್ಧಿಮಾನ್ ಸಾಹ. ಆದರೆ ವೃದ್ಧಿಮಾನ್ ಸಾಹಗೆ ಭುಜದ ಶಸ್ತ್ರಚಿಕಿತ್ಸೆಯಾಗಬೇಕಾಗಿರುವುದರಿಂದ ಸಾಹಗೆ ಪರ್ಯಾಯವಾಗಿ ವಿಕೆಟ್ ಕೀಪರ್ ನ ಅಗತ್ಯವಿದೆ.
ಶಸ್ತ್ರಚಿಕಿತ್ಸೆಯ ಬಳಿಕವೂ ದೀರ್ಘಾವಧಿವರೆಗೆ ಸಾಹ ತಂಡದಿಂದ ಹೊರಗುಳಿಯಲಿದ್ದಾರೆ. ಈ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದು, ಕಳೆದ 5-10 ವರ್ಷಗಳಲ್ಲಿ ವೃದ್ಧಿಮಾನ್ ಸಾಹ ಭಾರತದ ಅತ್ಯುತ್ತಮ ವಿಕೆಟ್ ಕೀಪರ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಸಾಹ ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ದೀರ್ಘಾವಧಿ ತಂಡದಿಂದ ಹೊರಗುಳಿಯಬಹುದು ಆದರೆ ಕಳೆದ 5-10 ವರ್ಷಗಳಲ್ಲಿ ಭಾರತ ಕಂಡ ಅತ್ಯುತ್ತಮ ವಿಕೆಟ್ ಕೀಪರ್ ಆಗಿದ್ದಾರೆ, ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಗಂಗೂಲಿ ಹೇಳಿದ್ದಾರೆ.