'ಕಾಫಿ ವಿತ್ ಕರಣ್' ಶೋ ಬಗ್ಗೆ ಕ್ರಿಕೆಟಿಗ ರಾಹುಲ್ ಹೇಳಿದ್ದೇನು ಗೊತ್ತಾ?

"ನನಗೇನೂ ಮಾಡಲಾಗದು, ಆದರೆ ನನ್ನ ಬಗ್ಗೆಯೇ ನನಗೆ ಅನುಮಾನವಿದೆ, ನನ್ನ ಸ್ವಂತ ಪಾತ್ರದ ಬಗ್ಗೆಯೇ ನನಗೆ ಸಂಶಯವಿದೆ" ಇದು ಭಾರತ ಕ್ರಿಕೆಟಿಗ ಕೆ.ಎಲ್. ರಾಹುಲ್ ಮಾತುಗಳು.
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್
Updated on
ನವದೆಹಲಿ: "ನನಗೇನೂ ಮಾಡಲಾಗದು, ಆದರೆ ನನ್ನ ಬಗ್ಗೆಯೇ ನನಗೆ ಅನುಮಾನವಿದೆ, ನನ್ನ ಸ್ವಂತ ಪಾತ್ರದ ಬಗ್ಗೆಯೇ ನನಗೆ ಸಂಶಯವಿದೆ" ಇದು ಭಾರತ ಕ್ರಿಕೆಟಿಗ ಕೆ.ಎಲ್. ರಾಹುಲ್ ಮಾತುಗಳು. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಟಿವಿ ಶೋ ಒಂದರಲ್ಲಿ ನೀಡಿದ್ದ ಸೆಕ್ಸಿಯಸ್ಟ್ ಹೇಳಿಕೆಗಳಿಂದ ದೇಶವ್ಯಾಪಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ರಾಹುಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಟಿವಿ ಶೋ ಒಂಡರಲ್ಲಿ ರಾಹುಲ್ ಹಾಗೂ ಪಾಂಡ್ಯ ಮಹಿಳೆಯ ಕುರಿತು ಅಗೌರವದ ಹೇಳಿಕೆ ನೀಡಿದ್ದ ಕಾರಣ ಬಿಸಿಸಿಐ ಅವರ ಮೇಲೆ  ತಾತ್ಕಾಲಿಕವಾಗಿ ಅಮಾನತು ಮಾಡಿತ್ತು. ಸುಪ್ರೀಂ ಕೋರ್ಟ್ ನೇಮಿಸಿರುವ ಬಿಸಿಸಿಐ ತನಿಖಾಧಿಕಾರಿಚಾರಣೆ ನಡೆಸಿದ್ದು ಆಡಳಿತ ಮಂಡಳಿ (ಸಿಒಎ) ಈ ಸಂಬಂಧದ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.
ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಗೆ ಹಿಂದಿರುಗಿದ ಬಳಿಕ ತಮ್ಮ ಜನ್ಮದಿನ ಕಳೆದು ವಾರದ ನಂತರ ರಾಹುಲ್ ತಮ್ಮ ತಾಳ್ಮೆ ಗುಣದ ಬಗ್ಗೆ ಹೇಳಿಕೊಂಡಿದ್ದಾರೆ.
"ನಾನು ಆಡಿದ ಮಾತು ಜನರಿಗೆ ನನ್ನನ್ನು ಇಷ್ಟಪಡದಂತೆ ಮಾಡುವಷ್ಟರ ಮಟ್ಟಿಗೆ ಪ್ರಭಾವ ಬೀರಿದೆ, ಟಿವಿ ಶೋಅ ಮೊದಲ ವಾರ ಅಥವಾ ಹತ್ತು ದಿನ ಏನಾಗಿತ್ತೋ ಅದರ ಬಗ್ಗೆ ನಾನು ಅಸಹಾಯಕನಾಗಿದ್ದೇನೆ.ಲ್ಲ ಆದರೆ ನನ್ನ ಬಗ್ಗೆ ಅನುಮಾನವಿದೆ, , ನನ್ನ ಸ್ವಂತ ಪಾತ್ರದ ಬಗ್ಗೆ  ಸಂಶಯವಿದೆ. ಅದರಲ್ಲಿಯೂ ನನ್ನ ಬಗ್ಗೆ ಅತ್ಯಂತ ಹೆಚು ಟೀಕೆಗಳು ಬಂದಾಗ ನನಗೆ ಈ ಸಂಶಯ ಕಾಡಿದೆ" ರಾಹುಲ್ ಹೇಳೀದ್ದಾರೆ.
ಹೊರಗಿನವರಿಂದ ಅಹಿತಕರ ಪ್ರಶ್ನೆಗಳನ್ನು "ಎದುರಿಸಲು ಭಯಭೀತರಾಗಿದ್ದರಿಂದ" ರಾಹುಲ್ ಸಂಕ್ಷಿಪ್ತವಾಗಿ ಉತ್ತರ ನೀಡಿದ್ದರು. "ನಾನಿನ್ನೂ ಸಿದ್ದವಾಗಿಇಲ್ಲದ ಕಾರಣ ನಾನು ಪ್ರಶ್ನೆ ಎದುರಿಸಲು ಹೆದರಿದ್ದೇನೆ. ಯಾರಾದರೂ ಪ್ರಶ್ನೆಗಳನ್ನು ಕೇಳುತ್ತಿದ್ದರೆ ನಾನು ಏನು ಉತ್ತರಿಸುತ್ತೇನೆಂದು ನನಗೆ ತಿಳಿದಿರಲಿಲ್ಲ ನಾನು ಅಭ್ಯಾಸ ನಡೆಸಿದ್ದೇನೆ.ಮತ್ತೆ ಮನೆಗೆ ಮರಳುವೆ,  ಆದರೆ ಈಗ ನಾನು ಮತ್ತೆ ನನ್ನ ಪ್ಲೇ ಸ್ಟೇಷನ್ ನಲ್ಲಿದ್ದೇನೆ, ಉತ್ತರಿಸಲು ಸಿದ್ದನಿದ್ದೇನೆ""
"ಟೀಂಇಂಡಿಯಾವನ್ನು ಆವರಿಸಿರುವ ಗ್ಲಾಮರ್ ಗಳಿಂದ ಅವರು ತಮ್ಮ ಹಿತೈಷಿಗಳೊಂದಿಗೆ ಸಂಪರ್ಕ ಸಾಧಿಸಲಾಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. "ನೀವು ದೇಶಕ್ಕಾಗಿ ಆಟವಾಡಲು ಪ್ರಾರಂಭಿಸಿದಾಗ, ನೀವು ತುಂಬಾವಿಚಲಿತರಾಗುತ್ತೀರಿ, ಆವೇಳೆ ನಿಮ್ಮ ನಿಜವಾದ ಸ್ನೇಹಿತರು ಯಾರು ಅಥವಾ ಕುಟುಂಬದ ಸಂಬಂಧಿಗಳ ಪ್ರಾಮುಖ್ಯತೆ ಏನೆನ್ನುವುದು ಮರೆಯಬೇಕಾಗುತ್ತದೆ. ನಾನು ದೀರ್ಘಕಾಲದಿಂದ ಉತ್ತಮ ಹಾದಿಯಲ್ಲಿದ್ದೇನೆ.ನಾನು ಬ್ರೇಕ್ ಪಡೆಯದ್ದರಿಂದ ಯ ಕುಟುಂಬ ಅಥವಾ ಸ್ನೇಹಿತರು ಸಂಪರ್ಕಕಡಿದುಕೊಂಡಿದ್ದೇನೆ.
"ನಾನು ಆಸ್ಟ್ರೇಲಿಯಾವನ್ನು ಬಿಟ್ಟು ಮನೆಗೆ ಹಿಂದಿರುಗಬೇಕಿರುವಾಗಲೂ, ನನ್ನ ಬಳಿಗೆ ಬಂದು, ತೋಳಿನ ಸುತ್ತಲೂ ತೋಳನ್ನು ಇಟ್ಟುಕೊಂಡು, 'ಅದು ಸರಿ, ನಾವು ಎಲ್ಲರೂ ಇದ್ದೇವೆ ಮತ್ತು ನಾವು ಸಹ ತಪ್ಪನ್ನು ಮಾಡಿದ್ದೇವೆ, ಹಾಗಾಗಿ ಪ್ರತಿಯೊಬ್ಬರೂ ಶಿಕ್ಷೆ ಎದುರಿಸುವುದು ಅನಿವಾರ್ಯ" ಹೀಗೆಂದು ಹೇಳುವವರು ಅತೀ ವಿರಳವೆನ್ನುವುದು ರಾಹುಲ್ ಮಾತು.
ಭಾರತೀಯ ತಂಡದ ಹಿರಿಯ ಸದಸ್ಯರು ಅವರಿಗೆ ಒಂದು ಸಲಹೆಯನ್ನು ನೀಡಿದ್ದರು: "ನೀವು ಸಾಮಾಜಿಕ ಮಾಧ್ಯಮದಿಂದ ಸ್ವೀಕರಿಸುತ್ತಿರುವ ದ್ವೇಷವನ್ನು ದೂರವಿಡಲು ಪ್ರಯತ್ನಿಸಿ ಮತ್ತು ನಿಮ್ಮ ಬಗ್ಗೆ ಅನುಮಾನವನ್ನು ಬಿಡಿ ಎಂದು ಆ ಸಲಹೆಯಾಗಿತ್ತು ಎನ್ನುವುದನ್ನು ರಾಹುಲ್ ಬಹಿರಂಗಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com