ನಿವೃತ್ತಿ ನಂತರ ವಾರ್ನರ್ ಚೆಂಡು ವಿರೂಪ ಹಗರಣದ ಬಗ್ಗೆ ಪುಸ್ತಕ ಬರೆದರೆ ಮಹತ್ವದ್ದಾಗಿರಲಿದೆ: ಸ್ಟುವರ್ಟ್ ಬ್ರಾಡ್

ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಎಂದಾದರೂ ಪುಸ್ತಕ ಬರೆಯಲು ನಿರ್ಧರಿಸಿದರೆ ಅವರು 2018ರ ಚೆಂಡು ವಿರೂಪ ಹಗರಣದ ಬಗ್ಗೆ ಬರೆಯಲಿ ಅದು ಮಹತ್ವದ್ದಾಗಿರಲಿದೆ ಎಂದು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟುವರ್ಟ್ ಬ್ರಾಡ್
ಸ್ಟುವರ್ಟ್ ಬ್ರಾಡ್
Updated on

ಲಂಡನ್: ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಎಂದಾದರೂ ಪುಸ್ತಕ ಬರೆಯಲು ನಿರ್ಧರಿಸಿದರೆ ಅವರು 2018ರ ಚೆಂಡು ವಿರೂಪ ಹಗರಣದ ಬಗ್ಗೆ ಬರೆಯಲಿ ಅದು ಮಹತ್ವದ್ದಾಗಿರಲಿದೆ ಎಂದು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ. 

ಈ ಹಗರಣದಿಂದಾಗಿ ಡೇವಿಡ್ ವಾರ್ನರ್ ರಾಷ್ಟ್ರೀಯ ನಾಯಕತ್ವದಿಂದ ಅಜೀವ ನಿಷೇಧಕ್ಕೆ ಗುರಿಯಾಗಿದ್ದಾರೆ. ಇನ್ನು ಹಗರಣದಲ್ಲಿನ ತನ್ನ ಪಾತ್ರಕ್ಕಾಗಿ ಕ್ಯಾಮರೂನ್ ಬ್ಯಾನ್ ಕ್ರಾಫ್ಟ್ ಸಹ ಒಂಬತ್ತು ತಿಂಗಳು ನಿಷೇಧಕ್ಕೆ ಗುರಿಯಾಗಿದ್ದರು. ಅಂದಿನ ಆಸ್ಟ್ರೇಲಿಯಾದ ಬೌಲಿಂಗ್ ತರಬೇತುದಾರ ಡೇವಿಡ್ ಸಾಕರ್ ಅಕ್ರಮ ತಂತ್ರದ ಜ್ಞಾನವು ಅದರಲ್ಲಿ ಪಾಲ್ಗೊಂಡಿದ್ದ ಮೂವರಿಗೆ ಮಾತ್ರ ಸೀಮಿತವಾಗಿಲ್ಲ ಎಂದೂ ಹೇಳಿದ್ದರೂ ಎಂದು ಸ್ಟುವರ್ಟ್ ಬ್ರಾಡ್ ಇಎಸ್ ಪಿಯನ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ತನಿಖೆಯ ಸಮಯದಲ್ಲಿ ತನ್ನ ಕಕ್ಷಿದಾರ, ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತು ಬ್ಯಾನ್‌ಕ್ರಾಫ್ಟ್‌ರನ್ನು ಕ್ರಿಕೆಟ್ ಆಸ್ಟ್ರೇಲಿಯಾ "ಅವಹೇಳನಕಾರಿಯಾಗಿ ಪರಿಗಣಿಸಿದೆ" ಮತ್ತು "ಅಂತಿಮವಾಗಿ ಸಂಪೂರ್ಣ ಸತ್ಯ, ಸತ್ಯವನ್ನು ಹೊರತುಪಡಿಸಿ ಏನೂ ಹೊರಬರುವುದಿಲ್ಲ ಎಂದು ವಾರ್ನರ್‌ನ ವ್ಯವಸ್ಥಾಪಕ ಜೇಮ್ಸ್ ಎರ್ಸ್ಕೈನ್ ಹೇಳಿದ್ದಾರೆ.

ಬ್ರಾಡ್ ತನ್ನ ಅನುಭವದಲ್ಲಿ, ಬೌಲರ್ ಚೆಂಡಿನ ಸ್ಥಿತಿಗೆ ಬಹಳ ಸಂವೇದನಾಶೀಲನಾಗಿರುತ್ತಾನೆ. ಅದೇ ರೀತಿ ತಂಡದ ಪ್ರತಿಯೊಬ್ಬರೂ ಅದನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು. 

2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಡೆದ ಚೆಂಡು ವಿರೂಪ ಹಗರಣ ಆಸ್ಟ್ರೇಲಿಯಾದ ಸಂಸ್ಕೃತಿ ಎಂಬ ಟೀಕೆಗೆ ಗುರಿಯಾಗಿತ್ತು. ಇನ್ನು ಹಗರಣದಿಂದಾಗಿ ಅಂದಿನ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪ ವಾರ್ನರ್ ಅವರ ಮೇಲೆ ಒಂದು ವರ್ಷದ ನಿಷೇಧ ಹೇರಲಾಗಿತ್ತು. ವಾರ್ನರ್ ಗೆ ನಾಯಕ್ವದಿಂದ ಅಜೀವ ನಿಷೇಧ ಹೇರಿದರೆ ಸ್ಮಿತ್ ಅವರನ್ನು ಎರಡು ವರ್ಷಗಳ ಕಾಲ ನಾಯಕತ್ವದಿಂದ ನಿರ್ಬಂಧಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com