ಇಂದೂ ಮೈಸೂರಿನಲ್ಲಿ ಜಂಬೂ ಸವಾರಿ ಸಾಗುತ್ತದೆ. ಮೈಸೂರು ರಾಜರು ಬಳಸುತ್ತಿದ್ದ ಸಾರೋಟುಗಳು, ಎತ್ತಿನಗಾಡಿ, ಪಲ್ಲಕ್ಕಿಗಳು, ಕುದುರೆಗಾಡಿ, ಆನೆಗಾಡಿಗಳು ಜಂಬೂಸವಾರಿಯಲ್ಲಿ ಸಾಲಾಗಿ ಸಾಗುತ್ತವೆ. ಕರ್ನಾಟಕ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಬಿಂಬಿಸುವ ಸ್ತಬ್ದಚಿತ್ರಗಳ ಮೆರವಣಿಗೆಯೂ ನಡೆಯುತ್ತದೆ. ಈ ಮೆರವಣಿಗೆಯಲ್ಲಿ ವೀರಗಾಸೆ, ಕೋಲಾಟ, ನಂದಿಧ್ವಜ, ತಾಳಮದ್ದಳೆ, ಕೀಲುಕುದುರೆ, ಹುಲಿವೇಷವೇ ಮೊದಲಾದ ಜಾನಪದ ತಂಡಗಳೂ ಪಾಲ್ಗೊಳ್ಳುತ್ತವೆ. ಸಂಜೆ ನಡೆಯುವ ಪಂಜಿನ ಮೆರವಣಿಗೆ ನಯನ ಮನೋಹರ.