ರೌಡಿ ಶೀಟರ್‌ನ ಕಗ್ಗೊಲೆ

ದುಷ್ಕರ್ಮಿಗಳ ಗುಂಪೊಂದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದೆ..
ಅಭಿಷೇಕ್(28)
ಅಭಿಷೇಕ್(28)

ಬೆಂಗಳೂರು: ನಗರದ ಗಡಿಭಾಗ ಅತ್ತಿಬೆಲೆಯಲ್ಲಿ ಕಳೆದ ರಾತ್ರಿ ದುಷ್ಕರ್ಮಿಗಳ ಗುಂಪೊಂದು ರೌಡಿ ಶೀಟರ್ ಒಬ್ಬನನ್ನು ಲಾಂಗು ಮಚ್ಚಿನಿಂದ ಭೀಕರವಾಗಿ ಹತ್ಯೆ ಮಾಡಿದೆ.

ಅತ್ತಿಬೆಲೆಯ ನಿವಾಸಿಯಾಗಿ ಅಭಿಷೇಕ್(28) ಎಂಬಾತನನ್ನು ದುಷ್ಕರ್ಮಿಗಳ ಗುಂಪೊಂದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದೆ. ಕಳೆದ ರಾತ್ರಿ ಎಂದಿನಂತೆ ಮನೆಗೆ ಬಂದ ಅಭಿಷೇಕ್ ಊಟ ಮುಗಿಸಿ ಮಲಗಿಕೊಂಡಿದ್ದನು.

ತಂದೆ ವಾಚ್‌ಮ್ಯಾನ್ ಕೆಲಸ ನಿರ್ವಹಿಸುತ್ತಿದ್ದು, ರಾತ್ರಿ ಪಾಳಿಗೆ ತೆರಳಿದ್ದರು. ತಾಯಿ ಸಂಬಂಧಿಕರನ್ನು ಭೇಟಿ ಮಾಡಲು ದೂರದ ಊರಿಗೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಸದುಪಯೋಗಪಡಿಸಿಕೊಂಡ ರೌಡಿ ಗುಂಪೊಂದು ಸುಮಾರು 1 ಗಂಟೆ ವೇಳೆಗೆ ಮಗಲಗಿದ್ದ ಅಭಿಷೇಕ್‌ನನ್ನು ಲಾಂಗು ಮಚ್ಚಿನಿಂದ ಹತ್ಯೆ ನಡೆಸಿ ಪರಾರಿಯಾಗಿದೆ.

ತಂದೆ ರಾತ್ರಿ ಪಾಳಿ ಮುಗಿಸಿಕೊಂಡು ಮನೆಗೆ ಹಿಂತಿರುಗಿದಾಗ ಮಗ ಶವವಾಗಿ ಪತ್ತೆಯಾಗಿದ್ದನ್ನು ಕಂಡು ಕೂಡಲೇ ಪೊಲೀಸರಿಗೆ ದೂರು ಸಲ್ಲಿಸದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಮೃತ ಅಭಿಷೇಕ್ ವಿರುದ್ಧ ಒಂದು ದರೋಡೆ ಮತ್ತು 1 ಕೊಲೆ ಪ್ರಕರಣಗಳು ದಾಖಲಾಗಿದ್ದವು.

ಈ ಕುರಿತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ದುಷ್ಕರ್ಮಿಗಳಿಗೆ ಜಾಲಾ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com