ನಾಯಿ ಹಾಲು ಕುರಿಮರಿಗಯ್ಯಾ!

ಅನಾಥ ಕುರಿಮರಿಗೆ ನಾಯಿಯೊಂದು ಆಸರೆಯಾಗಿ ನಿಂತು ತಾಯ್ತನ ಕರುಣಿಸುತ್ತಿದೆ...
ನಾಯಿ  ಅನಾಥ ಕುರಿಮರಿಗೆ ಹಾಲುಣಿಸುತ್ತಿರುವ ದೃಶ್ಯ
ನಾಯಿ ಅನಾಥ ಕುರಿಮರಿಗೆ ಹಾಲುಣಿಸುತ್ತಿರುವ ದೃಶ್ಯ

ಕೋಲಾರ: ಅನಾಥ ಕುರಿಮರಿಗೆ ನಾಯಿಯೊಂದು ಆಸರೆಯಾಗಿ ನಿಂತು ತಾಯ್ತನ ಕರುಣಿಸುತ್ತಿದೆ!

ಇಂಥದ್ದೊಂದು ಅಪರೂಪದ ಪ್ರಸಂಗ ತಾಲೂಕಿನ ಬೆಗ್ಲಿ ಬೆಣಜೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಲಕ್ಷ್ಮಮ್ಮ ಹಾಗೂ ವೆಂಕಟೇಶಪ್ಪ ಎಂಬವರು ಸಾಕಿದ್ದ ಕುರಿಯೊಂದು ತನ್ನ ಮರಿಗೆ ಜನ್ಮ ನೀಡಿದ ಕೆಲವೇ ದಿನಗಳಲ್ಲಿ ಪ್ರಾಣ ಬಿಟ್ಟಿತ್ತು.

ಆ ಮರಿಗೆ ಹಾಲು ಉಣಿಸಿ ಪಾಲನೆ ಮಾಡುವುದು ರೈತ ದಂಪತಿಗೆ ಕಷ್ಟವಾಗಿತ್ತು. ಕುರಿ ಮರಿಯು ಎಲ್ಲಿ ಕೈತಪ್ಪಿ ಹೋಗುತ್ತದೋ ಎಂದು ಆತಂಕದಲ್ಲಿದ್ದರು. ಆದರೆ, ಇವರೇ ಸಾಕಿದ್ದ ನಾಯಿ, ತನ್ನ ಮರಿಗಳೊಟ್ಟಿಗೆ ಕುರಿ ಮರಿಗೂ ಹಾಲುಣಿಸಿ ತಾಯ್ತನ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com