ಬಿಡಿಎ ವಶದಲ್ಲಿರುವ ರುದ್ರಭೂಮಿ ಬಿಟ್ಟುಕೊಡುವಂತೆ ಆಗ್ರಹಿಸಿ ನಾಳೆ ಪ್ರತಿಭಟನೆ

ಬಿಡಿಎ ವಶಪಡಿಸಿಕೊಂಡಿರುವ ತಲಘಟ್ಟಪುರ ಗ್ರಾಮದ ಗುಂಡುತೋಪು ರುದ್ರಭೂಮಿಯನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ನಾಳೆ ದಲಿತ...
ಪತ್ರಿಕಾಗೋಷ್ಠಿ ನಡೆಸಿದ ದಲಿತ ಸಂಘಮಿತ್ರ ಸೇನೆ ಮುಖಂಡರು
ಪತ್ರಿಕಾಗೋಷ್ಠಿ ನಡೆಸಿದ ದಲಿತ ಸಂಘಮಿತ್ರ ಸೇನೆ ಮುಖಂಡರು
Updated on

ಬೆಂಗಳೂರು: ಬಿಡಿಎ ವಶಪಡಿಸಿಕೊಂಡಿರುವ ತಲಘಟ್ಟಪುರ ಗ್ರಾಮದ ಗುಂಡುತೋಪು ರುದ್ರಭೂಮಿಯನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ನಾಳೆ ದಲಿತ ಸಂಘಮಿತ್ರ ಸೇನೆ ಪ್ರತಿಭಟನೆ ಹಮ್ಮಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಚಂದ್ರಪ್ಪ, ತಲಘಟ್ಟಪುರ ಗ್ರಾಮಪಂಚಾಯಿತಿಯ ವ್ಯಾಪ್ತಿಗೆ ಒಳಪಟ್ಟಿರುವ ಸರ್ವೇ ನಂಬರ್ 61ರ ಗುಂಡು ತೋಪುನಲ್ಲಿರುವ 1 ಎಕರೆ 20 ಗುಂಟೆ ವಿಸ್ತೀರ್ಣದ ಖಾಲಿ ಜಾಗ ಸ್ಮಶಾನವಾಗಿದ್ದು, ಪೂರ್ವಿಕರ ಕಾಲದಿಂದಲೂರು ಇಲ್ಲಿನ ಸ್ಥಳಿಯರಿಗೆ ಇದು ರುದ್ರ ಭೂಮಿವಾಗಿದೆ. ಈ ಭೂಮಿನಯನ್ನು 2001-2002ನೇ ಸಾಲಿನಲ್ಲಿ ಬಿಡಿಎ ವಶಪಡಿಸಿಕೊಂಡಿತ್ತು. ಅಂದಿನಿಂದಲೂ ಇಲ್ಲಿ ಶವಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಇಲ್ಲಿನ ಸ್ಥಳಿಯರಿಗೆ ಶವಸಂಸ್ಕಾರ ಮಾಡಲು ಕಷ್ಟಕರವಾಗಿರುತ್ತದೆ ಎಂದು ಹೇಳಿದ್ದಾರೆ.

ರುದ್ರಭೂಮಿಯನ್ನು ಬಿಟ್ಟುಕೊಡುವಂತೆ ಅನೇಕ ಭಾರಿ ಬಿಡಿಎ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ರುದ್ರಭೂಮಿ ಬಿಟ್ಟುಕೊಡುವಂತೆ ಒತ್ತಾಯಸಿ ನಾಳೆ ಬೆಳಿಗ್ಗೆ 9 ಗಂಟೆಗೆ ರಘುವನಹಳ್ಳಿಯಿಂದ ತಲಘಟ್ಟಪುರ ರುದ್ರಭೂಮಿಯವರೆಗೂ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com