ತುಮಕೂರು: ಖಡಕ್ ಅಧಿಕಾರಿ ಡಿ.ಕೆ. ರವಿ ಅವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕರೆ ಮೇರೆಗೆ ಗುರುವಾರ ನಡೆದ ತುಮಕೂರು ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗ್ಗೆ ವಿವಿಧ ಸಂಘಟನೆಗಳ ಮುಖಂಡರು ತುಮಕೂರಿನ ಟೌನ್ಹಾಲ್ ವೃತ್ತಕ್ಕೆ ಬೈಕ್ಗಳಲ್ಲಿ ಆಗಮಿಸಿ ಸಮಾವೇಶ ಗೊಂಡರು. ಅಲ್ಲಿಂದ ತೆರಳಿ ಸಿನಿಮಾ ಮಂದಿರ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ನಗರದಲ್ಲಿ ಬೈಕ್ ರ್ಯಾಲಿ ನಡೆಸಿದರು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿ ಗಳ ಜೀವಕ್ಕೆ ಸಂಚಕಾರ ಇದೆ. ಸತ್ಯಾಸತ್ಯತೆ ತಿಳಿಸಬೇಕಾದ ಸರ್ಕಾರ ಬರೀ ಸಬೂಬು ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾಲಯ ಮುಂಭಾಗ ಎಬಿವಿಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಲು ಮುಂದಾದಾಗ ಪೊಲೀಸರು ಚದುರಿಸಿದರು. ಟೈರ್ಗಳನ್ನು ಸುಡಲು ಯತ್ನಿಸಿದ ಗುಂಪನ್ನೂ ಚದುರಿಸಲಾಯಿತು. ಮುಖ್ಯ ರಸ್ತೆ ಹೊರತುಪಡಿಸಿದರೆ ಬೇರೆ ಬಡವಾಣೆಗಳಲ್ಲಿ ಅಂಗಡಿ, ಮುಗ್ಗಟ್ಟುಗಳು ತೆರೆದಿದ್ದವು.
Advertisement