ರಕ್ಷಣೆಗೊಂಡ 6 ವಿದ್ಯಾರ್ಥಿಗಳು
ಜಿಲ್ಲಾ ಸುದ್ದಿ
ಕಂದಕಕ್ಕೆ ಬಿದ್ದಿದ್ದ 5 ವಿದ್ಯಾರ್ಥಿಗಳ ರಕ್ಷಣೆ
ಯುಗಾದಿ ಹಬ್ಬದಂದು ಬೆಟ್ಟ ಹತ್ತಿ ಸಾಹಸ ಮಾಡಲು ಹೋದ ಆರು ಮಂದಿ ವಿದ್ಯಾರ್ಥಿಗಳ ಪೈಕಿ 5 ಮಂದಿ ವಿದ್ಯಾರ್ಥಿಗಳು 150 ಅಡಿ ಆಳದ ಕಂದಕಕ್ಕೆ ಬಿದ್ದು, ನಂತರ ಅವರನ್ನು ರಕ್ಷಣೆ ಮಾಡಿದ ಘಟನೆ ತಾಲೂಕಿನ ಸಾವನದುರ್ಗದಲ್ಲಿ ನಡೆದಿದೆ...
ಮಾಗಡಿ: ಯುಗಾದಿ ಹಬ್ಬದಂದು ಬೆಟ್ಟ ಹತ್ತಿ ಸಾಹಸ ಮಾಡಲು ಹೋದ ಆರು ಮಂದಿ ವಿದ್ಯಾರ್ಥಿಗಳ ಪೈಕಿ 5 ಮಂದಿ ವಿದ್ಯಾರ್ಥಿಗಳು 150 ಅಡಿ ಆಳದ ಕಂದಕಕ್ಕೆ ಬಿದ್ದು, ನಂತರ ಅವರನ್ನು ರಕ್ಷಣೆ ಮಾಡಿದ ಘಟನೆ ತಾಲೂಕಿನ ಸಾವನದುರ್ಗದಲ್ಲಿ ನಡೆದಿದೆ.
ಬೆಂಗಳೂರುನ ಪೀಣ್ಯಾ ಮೂಲದ 6 ಮಂದಿ ವಿದ್ಯಾರ್ಥಿಗಳಾದ ಅಜಿತ್ (18), ಹೇಮಂತ್ (17), ಮಂಜು (14), ನಿಕ್ಸನ್ (17), ಶ್ರೀಧರ್ (18) ಮತ್ತು ಲಕ್ಷ್ಮಣ್ (18) ಪಿಕ್ ನಿಕ್ ಗೆಂದು ಬೈಕ್ಗಳಲ್ಲಿ ಸಾವನದುರ್ಗಕ್ಕೆ ಬಂದಿದ್ದಾರೆ.
ಸಾವನದುರ್ಗದಲ್ಲಿರುವ ದೊಡ್ಡ ಏಕಶಿಲಾ ಬೆಟ್ಟವೆಂದೇ ಖ್ಯಾತಿಗಳಿಸಿರುವ ಸುಮಾರು 3 ಸಾವಿರ ಅಡಿ ಎತ್ತರದ ಬಿಳಿಕಲ್ಲು-ಕರಿಕಲ್ಲು ಬೆಟ್ಟವನ್ನ ಹತ್ತಿದ್ದಾರೆ. ಬೆಟ್ಟವನ್ನ ಹತ್ತಿದ ವಿದ್ಯಾರ್ಥಿಗಳು ಎರಡು ಬೆಟ್ಟದ ನಡುವಿನ ಕಂದಕದ ನಡುವೆ ಇಳಿಯಲು ಪ್ರಯತ್ನಿಸಿದಾಗ ಆಯತಪ್ಪಿ ಬಿದ್ದಿದ್ದಾರೆ. ಬೆಟ್ಟದ ನಡುವಿನ ಕಂದಕಲ್ಲೇ ಸಿಲುಕಿದ್ದವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ