ನಮ್ಮ ಶಾಲೆಯ ಮಕ್ಕಳು ಆಟದಲ್ಲೂ ಪಾಠದಲ್ಲೂ ಜಾಣರಾಗಿದ್ದರು. ರಾಧಮ್ಮಳನ್ನು ಅಡುಗೆಯವಳಾಗಿ ನೇಮಕ ಮಾಡಿದ್ದೇ ತಡ, ಶಾಲೆಯ ಚಿತ್ರಣವೇ ಬದಲಾಯಿತು ಎಂದು ಶಾಲಾಭಿವೃದ್ಧಿ ಮತ್ತು ನಿರೀಕ್ಷಣಾ ಸಮಿತಿಯ ಮುಖ್ಯಸ್ಥ ಸಿ. ತಿಮ್ಮಪ್ಪ ಹೇಳಿದ್ದಾರೆ. ಆದಾಗ್ಯೂ, ದಲಿತೆಯೊಬ್ಬಳು ಅಡುಗೆ ಮಾಡಿದ್ದನ್ನು ತಿನ್ನುವುದಕ್ಕೆ ಯಾರು ತಾನೆ ಒಪ್ಪುತ್ತಾರೆ? ಶಾಲೆಯ ಬಗ್ಗೆ ಯೋಚಿಸಿದರೆ ಬೇಜಾರಾಗುತ್ತದೆ ಅಂತಾರೆ ತಿಮ್ಮಪ್ಪ.