ಕಳೆದ ಬಾರಿ ಟಿ.ತಿಮ್ಮೇಶ್ ವಿರುದ್ಧ ಕೇವಲ 62 ಮತಗಳಿಂದ ಸೋತಿದ್ದ ಸದ್ಭಾವನಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಪ್ರಕಾಶ್ಮೂರ್ತಿ, ಪತ್ರಕರ್ತ ಪಿನಾಕ್ ಪಾಣಿ, ನೇ.ಭ. ರಾಮಲಿಂಗ ಶೆಟ್ಟಿ, ಅನಿಕೇತನ ಕನ್ನಡ ಬಳಗದ ಅಧ್ಯಕ್ಷ, ಬಿಬಿಎಂಪಿ ಉದ್ಯೋಗಿ ಮಾಯಣ್ಣ ಕಣದಲ್ಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕ ಸ್ವಾವಲಂಬನೆ, ಪುಸ್ತಕ ಮಾರಾಟಕ್ಕಾಗಿ ಪುಸ್ತಕ ರಥ, ಕಸಾಪಗೆ ಸುಸಜ್ಜಿತ ಕಟ್ಟಡ, ಸಾಹಿತಿಗಳು ತಂಗಲು ಅತಿಥಿಗೃಹ, ಬೆಂಗಳೂರಿನಲ್ಲಿ ಕನ್ನಡದ ಅಸ್ತಿತ್ವ ಬಲಗೊಳಿಸುವುದು... ಎಂಬಿತ್ಯಾದಿ ಭರವಸೆಗಳು ಪ್ರಚಲಿತವಾಗಿವೆ.