ಆದರೆ, ಟ್ಯೂಷನ್ಗೆ ತೆರಳದ ರಾಕೇಶ್ ಶಾಲೆಯ ಸುತ್ತಮುತ್ತ ಓಡಾಡಿಕೊಂಡಿದ್ದ. ಇದನ್ನು ಗಮನಿಸಿದ ಸ್ನೇಹಿತರು ಹಾಗೂ ಶಿಕ್ಷಕರು ಕೊಠಡಿಯೊಳಗೆ ಬರುವಂತೆ ಹೇಳಿದ್ದರು. ಆದರೆ, ಒಳಗೆ ಬಾರದೆ ಓಡಾಡುತ್ತಿದ್ದ ರಾಕೇಶ್ 7.30ರ ಸುಮಾರಿಗೆ ರಕ್ತ ಸುರಿಯುತ್ತಿದ್ದ ಕತ್ತಿನ ಭಾಗಕ್ಕೆ ಕೈ ಹಿಡಿದುಕೊಂಡು ಬಂದಿದ್ದ. ಈ ವೇಳೆ, ತನಗೆ ಯಾರೋ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಕುಯ್ದು ಪರಾರಿಯಾಗಿದ್ದಾರೆ ಎಂದು ಹೇಳಿದ್ದಾನೆ.