ನ್ಯಾ.ಎಸ್ ಬಿ ಮಜಗೆ
ನ್ಯಾ.ಎಸ್ ಬಿ ಮಜಗೆ

ಅಡಿ ಪದಚ್ಯುತಿ ಸರ್ಕಾರಕ್ಕೆ ಬಿಟ್ಟದ್ದು: ಮಜಗೆ

ಉಪ ಲೋಕಾಯುಕ್ತರ ಪದಚ್ಯುತಿ ನಿರ್ಧಾರ ಸರ್ಕಾರಕ್ಕೆ ಬಿಟ್ಟದ್ದು ಎಂದು ನಿವೃತ್ತ ಉಪ ಲೋಕಾಯುಕ್ತ...
Published on
ಬೆಂಗಳೂರು: ಉಪ ಲೋಕಾಯುಕ್ತರ ಪದಚ್ಯುತಿ ನಿರ್ಧಾರ ಸರ್ಕಾರಕ್ಕೆ ಬಿಟ್ಟದ್ದು ಎಂದು ನಿವೃತ್ತ ಉಪ ಲೋಕಾಯುಕ್ತ ಹಾಗೂ ಕಾಂಗ್ರೆಸ್ ಮುಖಂಡ ಭೀಮಣ್ಣ ಖಂಡ್ರೆ ಅವರ ಅಳಿಯ ನ್ಯಾ. ಎಸ್.ಬಿ.ಮಜಗೆ ಹೇಳಿದ್ದಾರೆ. 
``ಸುಭಾಷ್ ಅಡಿ ಕೆಲಬಾರಿ ಅಧಿಕಾರ ಹಸ್ತಕ್ಷೇಪ ಮಾಡಿದ್ದರು. ಡಾ.ಶೈಲಜಾ ಪಾಟೀಲ್ ಪ್ರಕರಣ ನನ್ನ ಬಳಿ ತನಿಖೆಗೆ ಬಂದಿತ್ತು. ಪ್ರಾಥಮಿಕ ವರದಿಯಲ್ಲಿ ಆರೋಪ ಸಾಬೀತಾಗಿತ್ತು. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದೆ. 
ಪ್ರಕರಣ ಅಡಿ ಬಳಿ ಹೇಗೆ ಹೋಯಿತು? ಶೈಲಜಾ ಅವರಿಗೆ ಕ್ಲೀನ್‍ಚಿಟ್ ಸಿಕ್ಕಿದ್ದು ಹೇಗೆ? ಎಂಬುದು ಗೊತ್ತಿಲ್ಲ . ನನ್ನ ತಂದೆ ಹಾಕಿಕೊಟ್ಟ ಮಾರ್ಗದಲ್ಲೇ ನಾನು ನಡೆಯುತ್ತಿದ್ದೇನೆ. ನನ್ನ ಮೇಲಿನ ಆರೋಪಗಳಿಗೆ ತಲೆ ಬಾಗುವೆ'' ಎಂದು ಸುವರ್ಣ ನ್ಯೂಸ್‍ಸಂದರ್ಶನದಲ್ಲಿ ಅವರು ಕಣ್ಣೀರುಗರೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com