ಮಾಡುವುದಕ್ಕೆ ಆದೇಶಿಸಿತ್ತು. ಈ ವಿಚಾರ ಸುಪ್ರೀಂ ಕೋರ್ಟ್ನ ಹಸಿರು ಪೀಠದ ಮುಂದಿತ್ತು. ಸದ್ಯ ಇರುವ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗೆ ಅನುಗುಣವಾಗಿ ಭದ್ರಾವತಿಯಲ್ಲಿರುವ ಎರಡು ಘಟಕಗಳ ಪೈಕಿ ಯಾವುದಾದರೂ ಒಂದು ಘಟಕ ನಡೆಸುವುದಕ್ಕೆ ಮಾತ್ರ ಕೋರ್ಟ್ ಆದೇಶಿಸಿದೆ. ಇದನ್ನಾಧರಿಸಿ ಹರ್ಷ ಗುಪ್ತ, ರೈತರಿಗೆ ಅನುಕೂಲವಾಗುವಂತೆ ಸಕ್ಕರೆ ಕಾರ್ಖಾನೆ ಆರಂಭಿಸಿ, ಕಾಗದದ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಿದರು. ಅಲ್ಲಿನ ನೌಕರರಿಗೆ ರಜೆ ಮತ್ತು ಅರ್ಧ ವೇತನ ನೀಡುವಂತೆ ಕಾರ್ಮಿಕ ಇಲಾಖೆ ಆದೇಶದಂತೆ ಕ್ರಮ ಕೈಗೊಂಡರು. ಆದರೆ, ಈ ಕ್ರಮಕ್ಕೆ ನೌಕರರು ಪ್ರತಿಭಟಿಸಿ, ಸಂಸ್ಥೆಯ ಅಧಿಕಾರಿಗಳನ್ನು ಬಂಧಿಸಿ ಗದ್ದಲ ಎಬ್ಬಿಸಿದ್ದರು.