ಕಾರ್ಯಕ್ರಮಕ್ಕೆ ವಾರ್ತಾ ಸಚಿವ ರೋಷನ್ ಬೇಗ್ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ ಮಾತನಾಡಿ, ಮದರಸಾಗಳ ಇತಿಹಾಸ, ಅವುಗಳ ಕಾರ್ಯ ವೈಖರಿ, ಜ್ಞಾನ ರಂಗಕ್ಕೆ ಮದರಸಾಗಳ ಕಾಣಿಕೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ವಿದ್ವಾಂಸರ ಪಾತ್ರ ವಿವರಿಸಿದರು. ಇದೇವೇಳೆ, ಪತ್ರಕರ್ತರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ ಸನಾವುಲ್ಲಾ, ಮುಂದಿನ ದಿನಗಳಲ್ಲಿ ಮದರಸಾಗಳಲ್ಲಿ ಹೆಚ್ಚಿನ ಸಕಾರಾತ್ಮಕ ಬದಲಾವಣೆಗಳು ಬರುವ ಸಾಧ್ಯತೆಗಳಿವೆ ಎಂದರು. ಬದಲಾಗುತ್ತಿವೆ ಪಠ್ಯ-ಕ್ರಮ: ಮದರಸಾಗಳ ಪಠ್ಯ ಹಾಗೂ ಶಿಕ್ಷಣ ರೀತಿ ಬದಲಾವಣೆಯ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಹಲವು ಮದರಸಾಗಳು ತಮ್ಮ ಬೊಧನಾಕ್ರಮಗಳನ್ನು ಆಧುನೀಕರಿಸಿಕೊಂಡಿವೆ. ಕೆಲವೆಡೆ